ಉಡುಪಿ: ಎ. 13ರಂದು ಧನ್ವಂತರಿ ಚಿಕಿತ್ಸಾಲಯ ಉದ್ಘಾಟನೆ

Update: 2019-04-12 12:45 GMT

ಉಡುಪಿ, ಎ.12: ಸಮಾಜದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಶ್ರೀಕೃಷ್ಣ ಮಠದ ಪರಿಸರದಲ್ಲಿ ನಿರ್ಮಿಸಿದ ಧನ್ವಂತರಿ ಚಿಕಿತ್ಸಾಲಯದ ಉದ್ಘಾಟನೆ ನಡೆಯಲಿದೆ.

ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ಇದ್ದ ಆನೆ ಲಾಯದಲ್ಲಿ ಪರ್ಯಾಯ ಶ್ರೀಪಾದರ ವಿಶೇಷ ಆಸಕ್ತಿಯಿಂದ ಸುಸಜ್ಜಿತವಾದ ಚಿಕಿತ್ಸಾ ಕೇಂದ್ರ ನಿರ್ಮಾಣ ಗೊಂಡಿದ್ದು ಅದನ್ನು ಶ್ರೀರಾಮನವಮಿಯ ಪರ್ವಕಾಲದಲ್ಲಿ ಶನಿವಾರ ಸಂಜೆ 5 ಗಂಟೆ ಶ್ರೀಗಳು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉಡುಪಿಯ ಉದ್ಯಮಿ ಡಾ.ಜಿ.ಶಂಕರ್, ಮೈಸೂರಿನ ಡಾ.ಡಿ.ಸುಧನ್ವ, ಗುರುರಾಜ್, ಡಾ.ಪಿ.ವಿ.ಭಂಡಾರಿ, ಚ್ಯವನ ಲ್ಯಾಬ್‌ನ ಎ.ಪಿ.ಭಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News