ರಾಗಧನ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕಿರಣ ಹೆಬ್ಬಾರ್
Update: 2019-04-12 12:49 GMT
ಉಡುಪಿ, ಎ.12: ಉಡುಪಿಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಕಲೆಗಳಿಗೆ ವಿಶೇಷ ಉತ್ತೇಜನ ನೀಡುವ ರಾಗಧನ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಡಾ. ಕಿರಣ್ ಹೆಬ್ಬಾರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇಲ್ಲಿ ಸೋಮವಾರ ನಡೆದ ರಾಗಧನ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಡಾ. ಕಿರಣ ಹೆಬ್ಬಾರರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳು: ಪ್ರೊ.ಆರ್.ಎಲ್.ಭಟ್-ಉಪಾಧ್ಯಕ್ಷ, ಉಮಾಶಂಕರಿ- ಕಾರ್ಯದರ್ಶಿ, ಪ್ರೊ.ಕೆ.ಸದಾಶಿವ ರಾವ್-ಖಜಾಂಚಿ ಹಾಗೂ ಪದ್ಮಾಭ ಮಧ್ಯಸ್ಥ- ಜೊತೆ ಕಾರ್ಯದರ್ಶಿ.