ಅಂದರ್ ಬಾಹರ್: ಐವರ ಬಂಧನ
Update: 2019-04-12 16:07 GMT
ಉಡುಪಿ, ಎ.12: ಕುಂದಾಪುರ ಕಾಳಾವರ ಗ್ರಾಮದ ನಾಗಬ್ರಹ್ಮ ಚಿತ್ತೇರಿ ಸಪರಿವಾರ ದೈವಸ್ಥಾನದ ಹಿಂಭಾಗ ಎ.11ರಂದು ಸಂಜೆ ವೇಳೆ ಅಂದರ್- ಬಾಹರ್ ಎಂಬ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.
ಕಾಳಾವರ ಗ್ರಾಮದ ಸುರೇಶ್ ಮೋಗವೀರ(40), ಮಹಾಬಲ ಪೂಜಾರಿ (43), ಶ್ರೀನಿವಾಸ (43), ಕೃಷ್ಣ ನಾಯ್ಕ (68), ಕೋಟೇಶ್ವರದ ಪ್ರಶಾಂತ (38) ಬಂಧಿತ ಆರೋಪಿಗಳು. ಇವರಿಂದ 10,050ರೂ. ನಗದು ವಶಪಡಿಸಿ ಕೊಳ್ಳಲಾಗಿದೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.