ರಾಮಕುಂಜ ದೇವಸ್ಥಾನ, ಆತೂರು ಮಸೀದಿಗೆ ಭೇಟಿ ನೀಡಿದ ಮಿಥುನ್ ರೈ

Update: 2019-04-12 17:45 GMT

ಉಪ್ಪಿನಂಗಡಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಿಥುನ್  ರೈ  ಕಡಬ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿರುವ ರಾಮಕುಂಜದ ಶ್ರೀ ರಾಮಕುಂಜೇಶ್ವರ ದೇವಸ್ಥಾನ ಮತ್ತು ಆತೂರು ಬದ್ರಿಯಾ ಜುಮಾ ಮಸೀದಿಗೆ ಭೇಟಿ ನೀಡಿದರು. 

ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ವತಿಯಿಂದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಸಮಿತಿ ಸದಸ್ಯರುಗಳಾದ ಅಂಗಾರ, ತೇಜಕುಮಾರ್, ನಾಗಪ್ಪ, ಕಾಂಗ್ರೆಸ್ ಕಾರ್ಯಕರ್ತರಾದ ದೇವಿಪ್ರಸಾದ್ ನೀರಾಜೆ, ಚಿಕ್ಕಪ್ಪ ಪೂಜಾರಿ, ಕರುಣಾಕರ ಗೌಡ ಮೊದಲಾದವರು  ಉಪಸ್ಥಿತರಿದ್ದರು.

ಆತೂರು ಮಸೀದಿ ಭೇಟಿ:

ಮಿಥುನ್ ರೈಯವರು ಆತೂರು ಬದ್ರಿಯಾ ಜುಮಾ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಸೀದಿ ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ದುವಾಃ ನೆರವೇರಿಸಿದರು. 

ಮಸೀದಿ ಆಡಳಿತ ಮಂಡಳಿ ಸದಸ್ಯರಾದ ಪೊಡಿಕುಂಞಿ ನೀರಾಜೆ, ಬಿ.ಆರ್. ಅಬ್ದುಲ್ ಖಾದರ್, ಪಕ್ಷದ ಕಾರ್ಯಕರ್ತರಾದ ಎಚ್. ಅಬ್ದುಲ್ ರಹಿಮಾನ್, ಕೆ.ಎ. ಸುಲೈಮಾನ್, ನಝೀರ್ ಪೂರಿಂಗ, ಎ.ಕೆ. ಬಶೀರ್, ಫಾರೂಕ್ ಅಮೈ ಮತ್ತಿತರರು ಉಪಸ್ಥಿತರಿದ್ದರು.

ಮಿಥುನ್ ರೈ ಅವರೊಂದಿಗೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಕೆ.ಪಿ.ಸಿ.ಸಿ. ಸದಸ್ಯ ಡಾ. ರಘು, ಕೆ.ಪಿ.ಸಿಸಿ. ಅಲ್ಪಸಂಖ್ಯಾತ ರಾಜ್ಯ ಸಂಯೋಜಕ ಎ.ಸಿ. ಜಯರಾಜ್, ಆತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯತೀಶ್ ಗೌಡ, ಜಗನ್ನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸದಸ್ಯ ಎಚ್.ಕೆ. ಇಲ್ಯಾಸ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ನಝೀರ್ ಮಠ, ಯು.ಟಿ. ತೌಸಿಫ್, ಶಬ್ಬೀರ್ ಕೆಂಪಿ, ಹನೀಫ್ ಕಡಬ, ಎ.ಎಸ್. ಶರೀಫ್ ಕಡಬ, ಅಶ್ರಫ್ ಕಡಬ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News