×
Ad

‘ಶಕ್ತಿ ಕ್ಯಾನ್ ಕ್ರಿಯೇಟ್’ ಬೇಸಿಗೆ ಶಿಬಿರ

Update: 2019-04-15 21:38 IST

ಮಂಗಳೂರು, ಎ.15: ಶಕ್ತಿನಗರದಲ್ಲಿನ ಶಕ್ತಿ ವಸತಿ ಶಾಲೆಯಲ್ಲಿ ನಡೆಯುತ್ತಿರುವ ‘ಶಕ್ತಿ ಕ್ಯಾನ್ ಕ್ರಿಯೇಟ್’ ಬೇಸಿಗೆ ಶಿಬಿರದಲ್ಲಿ ಕಲಾವಿದ ಹಾಗೂ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಸೋಮವಾರ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಅಕ್ಷರ ಸುಧಾರಣೆ, ರೇಖಾಚಿತ್ರ ಹಾಗೂ ಪರಿಸರದ ಪ್ರಾಣಿ, ಪಕ್ಷಿಗಳು, ಮರಗಿಡಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.

ಎ.11ರಿಂದ ಪ್ರಾರಂಭವಾದ ಈ ಶಿಬಿರದಲ್ಲಿ ಎರಡು ದಿನಗಳ ಕಾಲ ಪಾಲ್ಗೊಂಡ ಹೊಳ್ಳ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದರಲ್ಲಿ ಯಶಸ್ವಿಯಾದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಾನವನ ಬದುಕು ಪೂರ್ಣವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಕಾಡು ಪ್ರಾಣಿಗಳು ಮಾನವ ವಿರೋಧಿಗಳಲ್ಲ. ಈ ಜಗತ್ತಿನಲ್ಲಿ ಮಾನವನಿಗೆ ಬದುಕುವ ಹಕ್ಕು ಎಷ್ಟಿದೆಯೋ ಅಷ್ಟೇ ಹಕ್ಕು ಪ್ರಾಣಿ, ಪಕ್ಷಿ, ಕೀಟಗಳಿಗೂ ಇದೆ ಎಂದರು.

ಪ್ರಕೃತಿಯಲ್ಲಿರುವ ಮರ, ಗಿಡಗಳನ್ನು ನಾಶ ಪಡಿಸಿದರೆ ಅದು ಮಾನವನ ಸುಖ ಜೀವನಕ್ಕೆ ಕೊಡಲಿ ಏಟು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ತಾನೊಬ್ಬನೇ ಈ ಜಗತ್ತಿಗೆ ಒಡೆಯ ಎಂಬ ಮನುಷ್ಯನ ಸ್ವಾರ್ಥ ಭಾವನೆ ಅವನ ವಿನಾಶಕ್ಕೆ ಕಾರಣ ಎಂದು ಮಕ್ಕಳಿಗೆ ದಿನೇಶ್ ಹೊಳ್ಳ ಎಳೆ-ಎಳೆಯಾಗಿ ವಿವರಿಸಿದರು.

ಶಿಬಿರದಲ್ಲಿ ಶಾಲಾ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ. ಸ್ವಾಗತಿಸಿದರು. ಕಲಾ ಶಿಕ್ಷಕಿ ಪೂರ್ಣೇಶ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಶಿಕ್ಷಕಿ ಪೂರ್ಣಿಮಾ ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News