ಯಕ್ಷ ಕಲಾವಿದ ಚಂದ್ರ ಶೆಟ್ಟಿ ನಿಧನ
Update: 2019-04-18 16:22 GMT
ಉಡುಪಿ, ಎ.18:ಕಮಲಶಿಲೆ ‘ಎ’ಮೇಳದ ಹಾಸ್ಯ ಕಲಾವಿದ ಕುಂದಾಪುರ ತಾಲೂಕು ಹೊಸಂಗಡಿ ಸಮೀಏಪದ ಬೆದ್ರೊಳ್ಳಿ ಗ್ರಾಮದ ಚಂದ್ರ ಶೆಟ್ಟಿ ಬೆದ್ರೊಳ್ಳಿ (52) ಇವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ಸೌಕೂರು, ಅಮೃತೇಶ್ವರಿ, ಮಡಾಮಕ್ಕಿ ಹಾಗೂ ಕಮಲಶಿಲೆ ಮೇಳಗಳಲ್ಲಿ ಕಲಾವಿದರಾಗಿ ಅವರು ಸುಮಾರು 36 ವರ್ಷ ಕಲಾ ಸೇವೆ ಮಾಡಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಚಂದ್ರ ಶೆಟ್ಟಿ ಇವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.