ಹೃದಯಾಘಾತ: ಅಬ್ದುಸ್ಸಲಾಂ ಕಿನ್ಯ ನಿಧನ

Update: 2019-04-20 14:33 GMT

ಕೊಣಾಜೆ, ಎ.20: ಇಲ್ಲಿಗೆ ಸಮೀಪದ ನಾಟೆಕಲ್ ರಿಕ್ಷಾ ನಿಲ್ದಾಣದಲ್ಲಿ ಆಟೊರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಕಿನ್ಯ ಬದ್ರಿಯಾ ನಗರ ನಿವಾಸಿ ಅಬ್ದುಸ್ಸಲಾಂ (50) ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.

ಮೃತರು ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರನ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸಂತಾಪ: ತಮ್ಮಲ್ಲೊಬ್ಬರಾಗಿ ದುಡಿಯುತ್ತಿದ್ದ ಅಬ್ದುಸ್ಸಲಾಂ ಅವರ ಅನಿರೀಕ್ಷಿತ ನಿಧನಕ್ಕೆ ನಾಟೆಕಲ್ ಆಟೊರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷ ಉಮರ್ ಅನ್ಸಾರ್ ನಗರ, ಕಾರ್ಯದರ್ಶಿ ಹನೀಫ್ ನಡುದಾರಿ ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News