ಬೈಂದೂರು ಚುನಾವಣೆ: ಕರ್ತವ್ಯಕ್ಕೆ ಬಸ್ ವ್ಯವಸ್ಥೆ

Update: 2019-04-20 15:24 GMT

ಉಡುಪಿ, ಎ.20: ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎ.22ರಂದು ಮುಂಜಾನೆ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ತೆರಳುವ ಮತಗಟ್ಟೆ ಅಧಿಕಾರಿಗಳಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾರ್ಕಳ ಬಂಡೀಮಠ ಬಸ್ ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ಅಜೆಕಾರು -ಹೆಬ್ರಿ- ಹಾಲಾಡಿ-ಕುಂದಾಪುರ- ಮಾರ್ಗವಾಗಿ ಬೈಂದೂರು ಮಸ್ಟರಿಂಗ್ ಕೇಂದ್ರಕ್ಕೆ ಒಂದು ಬಸ್, ಬಜಗೋಳಿ ಬಸ್ ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ಕಾರ್ಕಳ- ಬೈಲೂರು-ಹಿರಿಯಡ್ಕ- ಉಡುಪಿ- ಬ್ರಹ್ಮಾವರ ಮಾರ್ಗವಾಗಿ ಕುಂದಾಪುರ ಮಸ್ಟರಿಂಗ್ ಕೇಂದ್ರಕ್ಕೆ 1ಬಸ್, ಬಂಡಿಮಠ ಬಸ್ ನಿಲ್ದಾಣದಿಂದ ಬೆಳಗ್ಗೆ 6ಕ್ಕೆ ನಿಟ್ಟೆ- ಬೆಳ್ಮಣ್- ಮಂಚಕಲ್- ಉಡುಪಿ- ಬ್ರಹ್ಮಾವರ-ಕುಂದಾಪುರ ಮಾರ್ಗ ವಾಗಿ ಬೈಂದೂರು ಮಸ್ಟರಿಂಗ್ ಕೇಂದ್ರಕ್ಕೆ 1ಬಸ್, ಬಂಡಿಮಠ ಬಸ್ ನಿಲ್ದಾಣ ದಿಂದ ಬೆಳಗ್ಗೆ 6 ಕ್ಕೆ ಬೈಲೂರು- ಹಿರಿಯಡ್ಕ- ಉಡುಪಿ-ಬ್ರಹ್ಮಾವರ-ಕುಂದಾಪುರ ಮಾರ್ಗವಾಗಿ ಬೈಂದೂರು ಮಸ್ಟರಿಂಗ್ ಕೇಂದ್ರಕ್ಕೆ 1 ಬಸ್ ತಲುಪಲಿವೆ ಎಂದು ಕಾರ್ಕಳ ತಹಶೀಲ್ದಾರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News