ಉಡುಪಿ: ಹಿರಿಯ ಗಣಿತ ಶಿಕ್ಷಕರಿಗೆ ಗೌರವಾರ್ಪಣೆ

Update: 2019-04-20 15:56 GMT

ಉಡುಪಿ, ಎ.20: ತಮ್ಮ ಸೇವಾವಧಿಯ ಕೊನೆಯ ಮೌಲ್ಯಮಾಪನ ಮುಗಿಸಿದ ಹಿರಿಯ ಶಿಕ್ಷಕರಾದ ಕಾರ್ಕಳ ಕಾಂತಾವರ ಪ್ರೌಢಶಾಲೆಯ ಕಮಲಾಕರ್, ಸಿದ್ಧಾಪುರ ಸರಕಾರಿ ಪ್ರೌಢಶಾಲೆಯ ಶೈಲೇಂದ್ರ ಕುಮಾರ್ ಹಾಗೂ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಲ್ಯಾಣಪುರದ ಮಾರಿಯೆಟ್ ಇವರನ್ನು ಉಡುಪಿ ವಳಕಾಡು ಪ್ರೌಢ ಶಾಲೆಯ ಗಣಿತ ಮೌಲ್ಯ ಮಾಪನ ಕೇಂದ್ರದಲ್ಲಿ ಇತ್ತೀಚೆಗೆ ಸಮ್ಮಾನಿಸಲಾಯಿತು.

ಶಿಕ್ಷಣಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್, ಜಂಟಿ ಮುಖ್ಯ ಮೌಲ್ಯಮಾಪಕ ರಾದ ಮುರಲಿ ಕಡೆಕಾರ್, ವಳಕಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಭಾಕರ್ ಶಾನುಭಾಗ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಹರಿಕೃಷ್ಣ ಹೊಳ್ಳ ವಂದಿಸಿ, ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News