×
Ad

ಬ್ಯಾರಿಕೇಡ್‌ಗೆ ಸ್ಕೂಟಿ ಢಿಕ್ಕಿ: ಸವಾರ ಮೃತ್ಯು

Update: 2019-04-20 21:58 IST

ಪಡುಬಿದ್ರಿ, ಎ.20: ಉಚ್ಚಿಲದ ಸರಸ್ವತಿ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರಿಸಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಎ.20ರಂದು ನಸುಕಿನ ವೇಳೆ ಎರಡು ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಸ್ಕೂಟಿ ಸವಾರ ಕಾಪು ಕೈಪುಂಜಾಲಿನ ಶಕೀತ್(24) ಎಂದು ಗುರುತಿಸಲಾಗಿದೆ.

ಹಿಂಬದಿ ಸವಾರ ಹರ್ಷಿತ್ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆಜಮಾಡಿ ಕೋಡಿಯಲ್ಲಿ ಮದರಂಗಿ ಕಾರ್ಯಕ್ರಮಕ್ಕೆ ಲೈಟಿಂಗ್ ಹಾಗೂ ಸೌಂಡ್ ಸಿಸ್ಟಮ್ ಅಳವಡಿಸಲು ಬಂದಿದ್ದ ಶಕೀತ್ ತನ್ನ ಸ್ಕೂಟಿಯಲ್ಲಿ ಹರ್ಷಿತ್‌ರನ್ನು ಹಿಂಬದಿ ಸವಾರರಾಗಿ ಕರೆದು ಕೊಂಡು ಪಡುಬಿದ್ರೆ ಕಡೆುಂದ ಕಾಪು ಕಡೆಗೆ ಹೊರಟಿದ್ದರು.

ಈ ವೇಳೆ ಸ್ಕೂಟಿ ರಸ್ತೆಯಲ್ಲಿ ಇರಿಸಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರಿಂದ ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಶಕೀತ್ ಹಾಗೂ ಹರ್ಷಿತ್ ತೀವ್ರ ವಾಗಿ ಗಾಯಗೊಂಡರು. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಶಕೀತ್ ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News