ಕೊಣಾಜೆ: ಅಕ್ರಮ ಜಾನುವಾರು ಸಹಿತ ರಿಕ್ಷಾ ವಶ

Update: 2019-04-20 17:01 GMT

ಕೊಣಾಜೆ: ಅಕ್ರಮವಾಗಿ ಕಟ್ಟಿ ಹಾಕಲಾಗಿದೆ ಎನ್ನಲಾದ 20  ಜಾನುವಾರು, ದನದ ಮಾಂಸ ಹಾಗೂ ರಿಕ್ಷಾ ವನ್ನು ಎಸಿಪಿ ನೇತೃತ್ವದ ವಿಶೇಷ ತಂಡ ಹಾಗೂ ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಉಳ್ಳಾಲದ ಕೋಡಿತೋಟ ಎಂಬಲ್ಲಿ ಶನಿವಾರ ನಡೆದಿದೆ. 

ದನ ಹಾಗೂ ಕರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದ ಎಸಿಪಿ ನೇತೃತ್ವದ ತಂಡ  ಸ್ಥಳಕ್ಕೆ ದಾಳಿ ನಡೆಸಿತ್ತು. ಆರೋಪಿ ಇಬ್ರಾಹಿಂ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News