ಪುತ್ತಿಗೆ ಶ್ರೀಗಳಿಂದ ಶಿಷ್ಯ ಸ್ವೀಕಾರ ?

Update: 2019-04-20 17:34 GMT

ಉಡುಪಿ, ಎ.20: ಉಡುಪಿಯ ಅಷ್ಟ  ಮಠಗಳಲ್ಲಿ ಒಂದಾದ ಪುತ್ತಿಗೆ ಮಠಕ್ಕೆ ಶಿಷ್ಯರೊಬ್ಬರನ್ನು ಸ್ವೀಕರಿಸಲು ಶ್ರೀಸುಗುಣೇಂದ್ರ ತೀರ್ಥ ಶ್ರೀ ನಿರ್ಧರಿಸಿದ್ದಾರೆಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಈ ಸಂಬಂಧ ಅವರು ಶಿಷ್ಯ ಸ್ವೀಕಾರ ಪ್ರಕ್ರಿಯೆಯನ್ನು ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ಪ್ರಾರಂಭಿಸಿದ್ದಾರೆಂದು ಹೇಳಲಾಗುತ್ತಿದೆ. ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವವರನ್ನು ಶಿಷ್ಯರಾಗಿ ಸ್ವೀಕರಿಸಲಿದ್ದಾರೆಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಮಾಹಿತಿಗಳನ್ನು ಗೌಪ್ಯವಾಗಿರಿಸಲಾಗಿದೆ.

ಅಷ್ಟ ಮಠಗಳಲ್ಲಿ ಇತ್ತೀಚೆಗೆ ಶಿಷ್ಯ ಸ್ವೀಕಾರ ಮಾಡುತ್ತಿರುವ ಮೂರನೇ ಮಠ ಇದಾಗಿದೆ. ಈ ಮೊದಲು ಅದಮಾರು ಮಠಕ್ಕೆ ಶ್ರೀ ಈಶಪ್ರಿಯ ತೀರ್ಥರು ಕಿರಿಯ ಯತಿಗಳಾಗಿ ನೇಮಕಗೊಂಡಿದ್ದರೆ, ಪರ್ಯಾಯ ಪಲಿಮಾರು ಶ್ರೀಗಳು ಮುಂದಿನ ತಿಂಗಳು ಶಿಷ್ಯ ಸ್ವೀಕಾರ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News