ಬಜಾಲ್: ಕಾಣೆಯಾಗಿದ್ದ ನವ ವಿವಾಹಿತನ ಮೃತದೇಹ ಪತ್ತೆ; ಕೊಲೆ ಶಂಕೆ

Update: 2019-04-21 04:04 GMT

ಮಂಗಳೂರು: ಬಜಾಲ್ ನಂತೂರ್ ಶಾಂತಿನಗರ ನಿವಾಸಿ ರಝಾಕ್ ಅಮ್ಮೆಂಬಳ ಎಂಬವರ ಪುತ್ರ ಮಿಕ್ದಾದ್ (28) ಎರಡು ದಿನಗಳಿಂದ ಕಾಣೆಯಾಗಿದ್ದು, ಶನಿವಾರ ರಾತ್ರಿ ಅವರ ಮೃತದೇಹ ವಳಚ್ಚಿಲ್ ನೇತ್ರಾವತಿ ನದಿ ಪಕ್ಕದಲ್ಲಿ ಪತ್ತೆಯಾಗಿದೆ.

ಕೊಲೆ ನಡೆದಿರುವ ಬಗ್ಗೆ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ ರವಿವಾರ ಸ್ಥಳೀಯ ಮಸೀದಿಯಲ್ಲಿ‌ ಮಿಕ್ದಾದ್ ಅವರ ಮದುವೆ ನಡೆದಿತ್ತು. ಅವರು ಶುಕ್ರವಾರ ಸಂಜೆ ಸ್ಥಳೀಯ ಮಸೀದಿಗೆ ತೆರಳಿರುವುದು ಸಿಸಿ‌ ಕ್ಯಾಮೆರಾದಲ್ಲಿ ಸ್ಪಷ್ಟಗೊಂಡಿದ್ದು, ಬಳಿಕ‌ ನಾಪತ್ತೆಯಾಗಿದ್ದರು.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News