ಭಾರವಾದ ಮತಗಟ್ಟೆ ಸಾಮಗ್ರಿ ಸಾಗಿಸಲು ಸಿಬ್ಬಂದಿ ಜೊತೆ ಕೈಜೋಡಿಸಿದ ಜಿಲ್ಲಾಧಿಕಾರಿ

Update: 2019-04-21 11:08 GMT

ತ್ರಿಶ್ಶೂರ್, ಎ.21: ಕೇರಳದಲ್ಲಿ ಈ ತಿಂಗಳ 23ರಂದು ಮತದಾನ ನಡೆಯಲಿದ್ದು, ರಾಜ್ಯಾದ್ಯಂತ ಅಧಿಕಾರ ಯಂತ್ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ನಡುವೆ ತ್ರಿಶ್ಶೂರ್ ಜಿಲ್ಲಾಧಿಕಾರಿ ಟಿ.ವಿ.ಅನುಪಮಾ, ಮತದಾನಕ್ಕೆ ಅಗತ್ಯವಾದ ಸಲಕರಣೆಗಳನ್ನು ಸಾಗಿಸಲು ಸಿಬ್ಬಂದಿಗೆ ನೆರವಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಭಾರವಾದ ಸಾಧನಗಳನ್ನು ಲಾರಿಯಿಂದ ಇಳಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪೆಟ್ಟಿಗೆಗಳನ್ನು ಎತ್ತಿ ಇಡುತ್ತಿರುವ ಹಾಗೂ ಅದನ್ನು ಕಟ್ಟಡದ ಒಳಕ್ಕೆ ಒಯ್ಯುತ್ತಿರುವ ಕುರಿತ ವಿಡಿಯೊ ವೈರಲ್ ಆಗಿದೆ. ಭಾರವಾದ ಪೆಟ್ಟಿಗೆಗಳನ್ನು ಎತ್ತಬೇಡಿ ಎಂದು ಸುತ್ತಮುತ್ತಲೂ ಸೇರಿದ್ದವರ ಸಲಹೆಯನ್ನು ಲೆಕ್ಕಿಸದೇ, ಲಾರಿಯಿಂದ ಪೆಟ್ಟಿಗೆಗಳನ್ನು ಇಳಿಸಿ ಸಾಗಿಸಲು ಜಿಲ್ಲಾಧಿಕಾರಿ ನೆರವಾದರು.

ಅನುಪಮಾ ಅವರ ಕರ್ತವ್ಯಪ್ರಜ್ಞೆ ಮತ್ತು ಬದ್ಧತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶ್ಲಾಘಿಸಲಾಗಿದ್ದು, ಇವರನ್ನು ಮಾದರಿ ಅಧಿಕಾರಿ ಎಂದು ಬಣ್ಣಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News