​ಉದ್ಯಾವರದಲ್ಲಿ ಇಬ್ಬರು ನಿರಾಶ್ರಿತ ಮಕ್ಕಳ ರಕ್ಷಣೆ

Update: 2019-04-22 14:20 GMT

ಉಡುಪಿ, ಎ.22: ಉದ್ಯಾವರ ಪರಿಸರದಲ್ಲಿ ನಿರಾಶ್ರಿತರಾಗಿದ್ದ ಇಬ್ಬರು ಮಕ್ಕಳನ್ನು ಉಡುಪಿ ಚೈಲ್ಡ್ ಲೈನ್ ತಂಡವು ಸಾರ್ವಜನಿಕರ ಸಹಕಾರದಿಂದ ರಕ್ಷಿಸಿದೆ.

ಇತ್ತೀಚೆಗೆ ಪ್ರಾರಂಭವಾದ ಮಕ್ಕಳ ಸಹಾಯ ವಾಣಿಗೆ ಸಾರ್ವಜನಿಕರು ಮಾಹಿತಿ ನೀಡಿದಂತೆ ತಂಡವು ಮಕ್ಕಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿತು. ಬಳಿಕ ಮಕ್ಕಳನ್ನು ಪುನರ್ವಸತಿಗಾಗಿ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲ ನಿಕೇತನ ಸಂಸ್ಥೆಗೆ ಒಪ್ಪಿಸಲಾಯಿತು.

ಮಕ್ಕಳ ತಾಯಿ ತೀವ್ರ ಅನಾರೋಗ್ಯದಿಂದ ಮಂಗಳೂರಿನ ಆಸತ್ರೆ ದಾಖಲಾ ಗಿದ್ದು, ಮಕ್ಕಳು ಎರಡು ವರ್ಷಗಳಿಂದ ಶಾಲೆಗೆ ಹೋಗಿರಲಿಲ್ಲ. ರಕ್ಷಣೆ ಮತ್ತು ಪೋಷಣೆಯ ಅವಶ್ಯಕತೆ ಇದ್ದ ಈ ಮಕ್ಕಳ ಪುನರ್ವಸತಿ ಕಾರ್ಯಕ್ಕೆ ಸಾರ್ವಜನಿಕ ರಿಂದ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News