ನೇಣು ಬಿಗಿದು ಯುವಕ ಆತ್ಮಹತ್ಯೆ

Update: 2019-04-22 15:04 GMT

ಬಂಟ್ವಾಳ, ಎ. 22: ಪ್ರೀತಿಸಿದ ಹುಡುಗಿಯ ಮನೆಯಿಂದ ಮದುವೆಗೆ ನಿರಾಕರಣೆ ಮಾಡಿದಕ್ಕಾಗಿ ಬೇಸತ್ತ ಪ್ರಿಯಕರನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂದ್ದಾರೆ ಎನ್ನಲಾದ ಘಟನೆ ಬಂಟ್ವಾಳ ಅಮ್ಟಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಮ್ಟಾಡಿ ಗ್ರಾಮ ಬಡಾಜೆ ನಿವಾಸಿ ದಿ. ಗುರುವಪ್ಪ ಪುಜಾರಿ ಎಂಬವರ ಪುತ್ರ ನೀತಿನ್ (27) ಆತ್ಮಹತ್ಯೆಗೆ ಶರಣಾದವರು.

ನೀತಿನ್ ಕೇಬಲ್ ನೆಟ್‍ವರ್ಕ್‍ನಲ್ಲಿ ಕೆಲಸ ಮಾಡಿಕೊಂಡಿದ್ದು, 7 ವರ್ಷಗಳಿಂದ ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ನಿತಿನ್ ಜೊತೆಗಿನ ಮದುವೆಗೆ ಆಕೆಯ ಮನೆಯವರು ನಿರಾಕರಣೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ಬೇಸತ್ತು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಿತಿನ್ ಸಹೋದರ ಚೇತನ್ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News