ಮಾಜಿ ಕ್ರಿಕೆಟಿಗ ಗಂಭೀರ್ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ

Update: 2019-04-22 18:10 GMT

ಹೊಸದಿಲ್ಲಿ,ಎ.22: ಮಾಜಿ ಕ್ರಿಕೆಟಿಗ-ಹಾಲಿ ರಾಜಕಾರಣಿ ಗೌತಮ ಗಂಭೀರ್ ಅವರನ್ನು ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯಾಗಿ ಬಿಜೆಪಿ ಸೋಮವಾರ ಘೋಷಿಸಿದೆ. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಹೊಸದಿಲ್ಲಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಗಂಭೀರ್ ಅವರು ಕಾಂಗ್ರೆಸ್‌ನ  ಅರವಿಂದರ್ ಸಿಂಗ್ ಲವ್ಲಿ ಮತ್ತು ಆಪ್‌ನ ಅತಿಷಿ ಅವರ ವಿರುದ್ಧ ಸೆಣಸಲಿದ್ದರೆ,ಲೇಖಿ ಅವರು ಕಾಂಗ್ರೆಸ್‌ನ ಅಜಯ ಮಾಕೆನ್ ಮತ್ತು ಆಪ್‌ನ ಬೃಜೇಶ ಗೋಯೆಲ್ ಅವರನ್ನು ಎದುರಿಸುತ್ತಿದ್ದಾರೆ.

ಕೇಂದ್ರ ಸಚಿವ ಹರ್ಷವರ್ಧನ,ಬಿಜೆಪಿ ರಾಜ್ಯಾಧ್ಯಕ್ಷ ಮನೀಷ್ ತಿವಾರಿ,ದಿಲ್ಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾರ ಪುತ್ರ ಪರ್ವೇಶ ವರ್ಮಾ ಮತ್ತು ರಮೇಶ ಬಿಧುರಿ ಅವರು ಅನುಕ್ರಮವಾಗಿ ಚಾಂದ್ನಿ ಚೌಕ್,ಈಶಾನ್ಯ ದಿಲ್ಲಿ,ಪಶ್ಚಿಮ ದಿಲ್ಲಿ ಮತ್ತು ದಕ್ಷಿಣ ದಿಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News