ಬಿರುವೆರ್ ಕುಡ್ಲ ದುಬೈ ಘಟಕದಿಂದ 1.15 ಲಕ್ಷ ರೂ. ನೆರವು

Update: 2019-04-24 12:50 GMT

ಮಂಗಳೂರು, ಎ.24: ಫ್ರೆಂಡ್ಸ್ ಬಳ್ಳಾಲ್‌ಬಾಗ್ ಬಿರುವೆರ್ ಕುಡ್ಲ ಮಂಗಳೂರು ಇದರ ಅಂಗ ಸಂಸ್ಥೆಯಾಗಿರುವ ಬಿರುವೆರ್ ಕುಡ್ಲ ದುಬೈ ಘಟಕದ ವತಿಯಿಂದ ಬುಧವಾರ ನಾಲ್ಕು ಅರ್ಹ ಕುಟುಂಬಗಳಿಗೆ 1.15 ಲಕ್ಷ ರೂ.ಆರ್ಥಿಕ ನೆರವು ವಿತರಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿದ್ದ ಕೋಡಿಕಲ್ ನಿವಾಸಿ ಯಾದವ್‌ಗೆ 30 ಸಾ.ರೂ., ಶಿಕ್ಷಣಕ್ಕಾಗಿ ವಿದ್ಯಾರ್ಥಿ ನಿಹಾಲ್‌ಗೆ 25 ಸಾ.ರೂ., ಉಡುಪಿ ಕುದ್ಕಲ್ ನಿವಾಸಿ ನಾರಾಯಣ ಆಚಾರ್ಯ ಮತ್ತು ಯತೀಶ್ ಪೂಜಾರಿ ಕುಟುಂಬಕ್ಕೆ ತಲಾ 30 ಸಾ.ರೂ. ನೆರವು ಹಸ್ತಾಂತರಿಸಲಾಯಿತು.

ಈ ಸಂದರ್ಭ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ, ದುಬೈ ಘಟಕದ ವಿಘ್ನೇಶ್, ಬಿರುವೆರ್ ಕುಡ್ಲ ದುಬೈ ಘಟಕದ ಸತೀಶ್ ಉಳ್ಳಾಲ್, ಮನೀಷ್,ಮಿತ್ರನಾಥ್ ಕೋಟ್ಯಾನ್,ಅರವಿಂದ್, ದ.ಕ. ಘಟಕದ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್‌ಬಾಗ್, ಡಾ.ಜ್ಯೋತಿ ಮಂಗಳೂರು, ಕಿಶೋರ್ ಬಾಬು, ಮಹೇಶ್ ಅಶೋಕನಗರ, ಪ್ರಾಣೇಶ್ ಬಂಗೇರಾ, ಕಿರಣ್ ಕುಲಾಲ್, ಕಿರಣ್ ಶೆಟ್ಟಿ, ವರ್ಜಿ ಪದವಿನಂಗಡಿ, ಗಣೇಶ, ಯಶ್ವಿನ್ ಬಳ್ಳಾಲ್‌ಬಾಗ್, ವಿಘ್ನೇಶ್ ಚಿಲಿಂಬಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News