ಉಡುಪಿ : ಎ. 25ರಂದು ಶೃದ್ಧಾಂಜಲಿ ಸಭೆ

Update: 2019-04-24 15:06 GMT

ಉಡುಪಿ, ಎ. 24: ಶ್ರೀಲಂಕಾದ ಕೊಲಂಬೊ ಸೇರಿದಂತೆ ವಿವಿಧ ನಗರಗಳಲ್ಲಿ ಈಸ್ಟರ್ ಹಬ್ಬದ ದಿನ ಭಯೋತ್ಪಾದಕರ ದಾಳಿಗೆ ಬಲಿಯಾದವರ ಆತ್ಮಗಳಿಗೆ ಸದ್ಗತಿ ಕೋರಿ ಉಡುಪಿ ಧರ್ಮಪ್ರಾಂತದ ಕ್ರೈಸ್ತ ಬಾಂಧವರಿಂದ ಮೌನ ಪ್ರಾರ್ಥನೆ ಹಾಗೂ ಮೊಂಬತ್ತಿ ಬೆಳಗಿ ಶೃದ್ದಾಂಜಲಿ ಸಭೆಯನ್ನು ಎ.25ರ ಸಂಜೆ 6ರಿಂದ 6:30ರವರೆಗೆ ಉಡುಪಿ ಶೋಕಮಾತಾ ಇಗರ್ಜಿಯ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಶೃದ್ಧಾಂಜಲಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಕ್ರೈಸ್ತ ಬಾಂಧವರು ಭಾಗವಹಿಸುವಂತೆ ಉಡುಪಿ ಧರ್ಮಪ್ರಾಂತದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News