ಎ.26: ಕಾನೆಕೆರೆ ಮಸ್ಜಿದ್ ಉದ್ಘಾಟನೆ

Update: 2019-04-24 17:37 GMT

ಉಳ್ಳಾಲ, ಎ.24: ಟಿಐಎಮ್ ಮತ್ತು ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಕಾನೆಕೆರೆ ಶಾಖೆ ಹಾಗೂ ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇರಳಕಟ್ಟೆ ಕಾನೆಕೆರೆಯಲ್ಲಿ ನಿರ್ಮಿಸಲಾದ ತಾಜುಲ್ ಉಲಮಾ ಮಸ್ಜಿದ್‌ನ ಉದ್ಘಾಟನೆ ಹಾಗೂ ಜುಮುಆ ಸ್ಥಾಪನೆಯು ಎ.26ರಂದು ನಡೆಯಲಿದೆ.

ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೂರತ್ ಅವರು ತಾಜುಲ್ ಉಲಮಾ ಮಸ್ಜಿದ್ ಉದ್ಘಾಟಿಸಲಿದ್ದಾರೆ. ಸೈಯದ್ ಶಿಹಾಬುದ್ದೀನ್ ತಂಙಳ್ ಅಲ್-ಮಶ್‌ಹೂರು ತಲಕ್ಕಿ, ಮಂಜನಾಡಿ ಅಬ್ಬಾಸ್ ಉಸ್ತಾದ್ ಹಾಗೂ ಅಬೂಸ್ವಾದಿಕ್ ಬಿ.ಮುಹಮ್ಮದ್ ಫೈಝಿ ಚೆರ್ವತ್ತೂರು ಜುಮುಅ ನೇತೃತ್ವ ವಹಿಸಲಿದ್ದಾರೆ.

ಮಗ್ರಿಬ್ ನಮಾಝಿನ ಬಳಿಕ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್‌ನ ಉಪ ಖಾಝಿ ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ನೇತೃತ್ವದಲ್ಲಿ ಜಾಮಿಅ ಸಅದಿಯ್ಯಾ ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರಭಾಷಣಗೈಯಲಿದ್ದಾರೆ ಎಂದು ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ವಿ.ಯು. ಇಸ್ಹಾಕ್ ಝುಹ್‌ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News