ಎ. 26ರಿಂದ ಕರಾವಳಿ ಕಲಾವಿದ ಮಲ್ಪೆ ಆಶ್ರಯದಲ್ಲಿ 'ನಾಟಕೋತ್ಸವ-2019'
Update: 2019-04-25 12:55 GMT
ಉಡುಪಿ, ಎ.25: ಕರಾವಳಿ ಕಲಾವಿದ ಮಲ್ಪೆ ಇವರ ಆಶ್ರಯದಲ್ಲಿ ಸುಬೋಧಿನಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಎ. 26ರಿಂದ 28ರ ವರೆಗೆ ‘ನಾಟಕೋತ್ಸವ- 2019’ ನಡೆಯಲಿದೆ.
ಅಂದು ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡಗು, ಬಡಗುಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಶೇಖರ್ ಬೈಕಾಡಿ, ಪ್ರಕಾಶ್ ಕರ್ಕೇರ, ವಿಶ್ವನಾಥ್ ಪೂಜಾರಿ, ಗಣೇಶ ಸಾಲಿಯಾನ್, ವಿದ್ದು ಉಚ್ಚಿಲ ಭಾಗವಹಿಸಲಿದ್ದಾರೆ.
ಮೊದಲ ದಿನವಾದ ಶುಕ್ರವಾರ ನಂದಳಿಕೆ ನಾರಾಯಣ ಶೆಟ್ಟಿ ರಚನೆಯ ‘ಬೊಜ್ಜ’, 27ರಂದು ಅಶೋಕ್ ತಾಠೋಳೆ ರಚನೆಯ ‘ಕೇಸ್ ನಂಬರ್ 99’, 28ರಂದು ನಾರಾಯಣ ಶೆಟ್ಟಿ ನಂದಳಿಕೆ ರಚನೆ ‘ಸಂಸಾರ’ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.