ಎ. 26: ಯುನಿವೆಫ್ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮ

Update: 2019-04-25 15:09 GMT

ಮಂಗಳೂರು: ಪವಿತ್ರ ರಮಝಾನ್ ಮತ್ತು ಇತರ ಆರಾಧನೆಗಳ ಹಿನ್ನೆಲೆ, ಇಫ್ತಾರ್, ದುಆ, ಖಿಯಾಮುಲ್ಲೈಲ್, ಇಅತಿಕಾಫ಼್ ಮತ್ತಿತರ ಪುಣ್ಯ ಕಾರ್ಯಗಳ ಪ್ರಾಮುಖ್ಯತೆ ವಿಷಯಗಳ ಬಗ್ಗೆ ಎ. 26ರಂದು ಸಂಜೆ 7.30ಕ್ಕೆ ಫಳ್ನೀರ್ ಲುಲು ಸೆಂಟರ್ ನಲ್ಲಿರುವ ದಾರುಲ್ ಇಲ್ಮ್ ಮದ್ರಸ ಹಾಲ್ ನಲ್ಲಿ ಸಾರ್ವಜನಿಕರಿಗೆ ಮಾಹಿತಿ  ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿ ಭಾಗವಹಿಸಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಮಾಡಲಾಗಿದೆ ಎಂದು ಸಂಚಾಲಕ ಹುದೈಫ್ ಕುದ್ರೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News