×
Ad

ಎ. 27ರಿಂದ ದೇರಳಕಟ್ಟೆಯಲ್ಲಿ ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ

Update: 2019-04-26 21:52 IST

ಮಂಗಳೂರು, ಎ. 26: ಅಮೇಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಹಾಗೂ ದ.ಕ. ಅಮೇಚೂರ್ ಕಬಡ್ಡಿ ಅಸೋಸಿಯೇಶನ್, ಕಾಸ್ಕ್ ನರಿಂಗಾನ, ಶಮ ಗೋಲ್ಡ್, ಸಹರಾ ಸ್ಪೋಟ್ಸ್ ಮತ್ತು ಶದಾ ಟ್ರೇಡರ್ಸ್‌ ದೇರಳಕಟ್ಟೆ ವತಿಯಿಂದ ಎ.27 ಮತ್ತು 28ರಂದು ಅಖಿಲ ಭಾರತ ಮಟ್ಟದ ಎ ಗ್ರೇಡ್ ಕಬಡ್ಡಿ ಪಂದ್ಯಾಟ ಆರ್ಮಿ ಟ್ರೋಫಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕಬಡ್ಡಿ ಆಟಗಾರ, ಪ್ರೊ ಕಬಡ್ಡಿ ತರಬೇತುದಾರ ಜಗದೀಶ್ ಕುಂಬ್ಳೆ, ಸಂಜೆ 4 ಗಂಟೆಯಿಂದ ಮಧ್ಯರಾತ್ರಿಯವರೆಗೆ ದೇರಳಕಟ್ಟೆಯ ಗ್ರೀನ್ ಮೈದಾನದಲ್ಲಿ ಈ ಪಂದ್ಯಾಟ ನಡೆಯಲಿದೆ ಎಂದರು.

ಟೂರ್ನಮೆಂಟ್‌ನಲ್ಲಿ ಇನ್ಕಮ್ ಟ್ಯಾಕ್ಸ್ ಡೆಲ್ಲಿ, ಒಎನ್‌ಜಿಸಿ ಗುಜರಾತ್, ಇಂಡಿಯನ್ ನೇವಿ, ಏರ್ ಇಂಡಿಯಾ ಮುಂಬೈ, ಇಂಡಿಯನ್ ಆರ್ಮಿ, ಮಹೀಂದ್ರ ಆ್ಯಂಡ್ ಮಹೀಂದ್ರ ಮಹಾರಾಷ್ಟ್ರ, ಇಂಡಿಯನ್ ರೈಲ್ವೇಸ್ ಮತ್ತು ಆಳ್ವಾಸ್ ಮೂಡುಬಿದಿರೆ ತಂಡಗಳು ಭಾಗವಹಿಸಲಿದ್ದು, ಪ್ರತಿಯೊಂದು ತಂಡದಲ್ಲಿಯೂ ಪ್ರೋ-ಕಬಡ್ಡಿ ಆಟಗಾರರು ಕೂಡ ಆಟವಾಡಲಿದ್ದಾರೆ ಎಂದು ತಿಳಿಸಿದರು.

ಮೊದಲನೇ ಸ್ಥಾನ ಪಡೆದ ತಂಡಕ್ಕೆ 2 ಲಕ್ಷ ರೂ. ಮತ್ತು ಟ್ರೋಫಿ, ಎರಡನೇ ಸ್ಥಾನ ಪಡೆದ ತಂಡಕ್ಕೆ 1.50 ಲಕ್ಷ ರೂ., ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ತಲಾ 1 ಲಕ್ಷ ರೂ. ಬಹುಮಾನ, ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ರಥನ್ ಶೆಟ್ಟಿ ಮಾತನಾಡಿ, ಎ.27ರಂದು ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶದಾ ಟ್ರೇಡರ್ಸ್‌ನ ಅಶ್ರಫ್ ಮಲಾರ್, ಕಾಸ್ಕ್ ನರಿಂಗಾನದ ಪ್ರಧಾನ ಕಾರ್ಯದರ್ಶಿ ನವಾಝ್ ಎಂ.ಬಿ. ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News