ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ನಿಂದ ಓರ್ಬಿಟ್ ಕೆರಿಯರ್ ಗೈಡೆನ್ಸ್
ಸುರತ್ಕಲ್, ಎ.27: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ಓರ್ಬಿಟ್ ಕೆರಿಯರ್ ಗೈಡೆನ್ಸ್ ಕಾರ್ಯಾಗಾರವು ಕೃಷ್ಣಾಪುರದ ಅಲ್ ಬದ್ರಿಯಾ ಸ್ಕೂಲಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಆಸಿಫ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷ ಫಾರೂಖ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಮಾಸ್ಟರ್ ಉಲ್ಲಾಸ್ ಜೆ. ಉಚ್ಚಿಲ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಬದ್ರಿಯಾ ಸ್ಕೂಲ್ ಅಧ್ಯಕ್ಷ ಬಿ.ಎ.ನಝೀರ್ ಹಾಜಿ ಹಾಗೂ ಸಂಚಾಲಕ ಎಸ್.ಎಂ.ಹಮೀದ್ ಸಂದೇಶ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ಜಿಲ್ಲಾ ಸದಸ್ಯರಾದ ಆರಿಫ್ ಝುಹ್ರಿ ಮುಕ್ಕ, ಜಿಲ್ಲಾ ಕಾರ್ಯದರ್ಶಿ ರಫೀಖ್ ಸುರತ್ಕಲ್ , ಕೆ.ಸಿ.ಎಫ್. ದಮಾಮ್ ಘಟಕದ ನಾಯಕರಾದ ಮನ್ಸೂರ್ ಕಾಟಿಪಳ್ಳ, ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷ ಉನೈಸ್, ಕಾಟಿಪಳ್ಳ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಕಾಟಿಪಳ್ಳ, ಕೃಷ್ಣಾಪುರ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಅಫ್ರಿದ್ ಜಂಕ್ಷನ್, ಮುಲ್ಕಿ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ರಾಹಿಲ್ ಪಕ್ಷಿಕೆರೆ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರ.ಕಾರ್ಯದರ್ಶಿ ಹೈದರಲಿ ಸ್ವಾಗತಿಸಿ, ವಂದಿಸಿದರು.