ಮಂಜೇಶ್ವರ: ಮಾರುಕಾಯುಧ ಹೊಂದಿದ್ದ ನಾಲ್ವರ ಬಂಧನ

Update: 2019-04-27 14:28 GMT

ಮಂಜೇಶ್ವರ: ಕುಂಬಳೆ ಪೇಟೆಯಲ್ಲಿ ಶುಕ್ರವಾರ ರಾತ್ರಿ ಸಂಶಯಾಸ್ಪದವಾಗಿ ಆಲ್ಟೋ ಕಾರೊಂದರಲ್ಲಿ ತಿರುಗಾಡುತ್ತಿದ್ದ ನಾಲ್ವರನ್ನು ಕುಂಬಳೆ ಪೋಲಿಸರು ಬಂಧಿಸಿದ್ದು, ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಪಂಜತ್ತೊಟ್ಟಿ ವಿನಯಚಂದ್ರ(19), ಕಂಚಿಕಟ್ಟೆ ನಿವಾಸಿ ವಸಂತ್(30), ಮುಟ್ಟಂ ನಿವಾಸಿ ಇಸ್ಮಾಯಿಲ್(33)ಹಾಗೂ ಅಜಿತ್ ಪಚ್ಚಂಬಳ(28) ಬಂಧಿತರು. ಕಾರಿನಲ್ಲಿ ಕತ್ತಿ, ಎರಡು ಕಬ್ಬಿಣದ ರಾಡ್ ಪತ್ತೆಯಾಗಿದ್ದು, ಆಕ್ರಮಣ ನಡೆಸಲು ಈ ಗುಂಪು ಹೊಂಚು ಹಾಕುತ್ತಿರಬೇಕೆಂದು ಸಂಶಯಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಹೆಚ್ಚಿನ ವಿಚಾರಣೆಗೆ ಪೋಲೀಸರಿಗೆ ಬಿಟ್ಟುಕೊಟ್ಟಿದ್ದು, ತೀವ್ರ ತನಿಖೆಗೆ ಪೋಲೀಸರು ಚಾಲನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News