​ರೇಂಜ್ ಅಧ್ಯಾಪರ ಜಲ್ಸತುಲ್ ವಿದಾಅ್ ಕಾರ್ಯಕ್ರಮ

Update: 2019-04-27 15:22 GMT

ನಾವುಂದ, ಎ.27: ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ನಾವುಂದ ರೇಂಜ್ ವತಿಯಿಂದ ಇತ್ತೀಚೆಗೆ ನಿಧನರಾದ ಮೂಳೂರು ಸುಹೈಲ್ ಸಅದಿ ರವರ ಹೆಸರಿನಲ್ಲಿ ತಹ್’ಲೀಲ್ ಸಮರ್ಪಣೆ ಹಾಗೂ ರೇಂಜಿಗೊಳಪ್ಪಟ್ಟ ಅಧ್ಯಾಪಕರ ಜಲ್ಸತುಲ್ ವಿದಾಅ್ ಕಾರ್ಯಕ್ರಮವು ಇತ್ತೀಚೆಗೆ ರೇಂಜಿನ ಸೆಂಟ್ರಲ್ ಮದ್ರಸ ನಾವುಂದ ಬುಸ್ತಾನುಲ್ ಉಲೂಂ ಕೇಂದ್ರ ಮದ್ರಸದಲ್ಲಿ ನಡೆಯಿತು.

ಅಸ್ಸಯ್ಯಿದ್ ಬದ್ರುದ್ದೀನ್ ತಂಙಲ್ ಅಲ್ಮದನಿ ಮಾಣಿಕೊಳಲು ದುವಾ ನೆರವೇರಿಸಿದರು. ಅಧ್ಯಕ್ಷತೆಯನ್ನು ರೇಂಜ್ ಅಧ್ಯಕ್ಷ ಎಸ್.ಎಂ.ಹನೀಫ್ ಸಅದಿ ನಾವುಂದ ವಹಿಸಿದ್ದರು. ರೇಂಜ್ ಮುಫತ್ತಿಷ್ ಮುಹಮ್ಮದ್ ಹಸನ್ ಸಖಾಫಿ ಅಡ್ಯಾರು ಣ್ಣೂರು ಸಭೆಯನ್ನು ಉದ್ಘಾಟಿಸಿದರು.

ಟ್ರೈನಿಂಗ್ ವಿಭಾಗದ ಅಧ್ಯಕ್ಷ ಸಿದ್ದೀಖ್ ಸಖಾಫಿ ಚಾತನಕೆರೆ, ಕಾರ್ಯದರ್ಶಿ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಕೋಯನಗರ, ಪರೀಕ್ಷಾ ವಿಭಾಗದ ಕಾರ್ಯದರ್ಶಿ ರಶೀದ್ ಮದನಿ ಚಾತನಕೆರೆ, ಮ್ಯಾಗಝಿನ್ ವಿಭಾಗದ ಅಧ್ಯಕ್ಷ ಹಮೀದ್ ಮದನಿ ಮಾವಿನಕಟ್ಟೆ, ಕಾರ್ಯದರ್ಶಿ ಬದ್ರುದ್ದೀನ್ ಝುಹುರಿ ನಾವುಂದ, ಮಿಷನರಿ ವಿಭಾಗದ ಅಧ್ಯಕ್ಷ ಅಬ್ಬಾಸ್ ಮದನಿ ಮರವಂತೆ ಕಾರ್ಯದರ್ಶಿ ಜಬ್ಬಾರ್ ಸಖಾಫಿ ಗಂಗೊಳ್ಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಮಳಾನ್ ಪ್ರಯುಕ್ತ ರೇಂಜಿಗೊಳಪ್ಪಟ್ಟ ಎಲ್ಲ ಮದ್ರಸಗಳ ಪ್ರತಿ ಅಧ್ಯಾಪಕರಿಗೂ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು. ರೇಂಜ್ ವೆಲ್ಫೇರ್ ವಿಭಾಗದ ಕಾರ್ಯದರ್ಶಿ ಅನ್ಸಾರ್ ಸಖಾಫಿ ಕೌಂಜೂರು ಕುರಾನ್ ಪಠಿಸಿದರು. ರೇಂಜ್ ಕೋಶಾಧಿಕಾರಿ ಹಾಜಿ ಅಯ್ಯೂಬ್ ಮುಸ್ಲಿಯಾರ್ ಉಪ್ಪುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಾಫೀ ಸಖಾಫಿ ಆಕಳಬೈಲು ಸ್ವಾಗತಿಸಿದರು. ವೆಲ್ಫೇರ್ ವಿಭಾಗದ ಅಧ್ಯಕ್ಷ ಫಾರೂಖ್ ಸಖಾಫಿ ಬಡಾಕೆರೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News