ಮಂಗಳೂರಿನಲ್ಲೂ ಮುಂದುವರಿದ ಮುಖ್ಯಮಂತ್ರಿಯ ಮಾಧ್ಯಮ ಮುನಿಸು!

Update: 2019-04-28 18:42 GMT

ಮಂಗಳೂರು, ಎ.28: ಉಡುಪಿಗೆ ತೆರಳಲೆಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮದವರ ಜತೆ ಮಾತನಾಡದೇ ನೇರವಾಗಿ ಕಾರನ್ನೇರಿ ಹೊರಟ ಘಟನೆ ರವಿವಾರ ರಾತ್ರಿ ನಡೆದಿದೆ.

ರಾತ್ರಿ 9:30ರ ಸುಮಾರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಮಾಧ್ಯಮದವರು ಎದುರುಗೊಳ್ಳುತ್ತಿದ್ದಂತೆ ಕಂಡು ಕಾಣದಂತೆ ಮುಖ ತಿರುಗಿಸಿ ಕಾರು ಹತ್ತಿ ಉಡುಪಿಯತ್ತ ಪಯಣ ಬೆಳೆಸಿದರು.

ಉಡುಪಿಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಪುತ್ರಿ ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಡುಪಿಗೆ ಆಗಮಿಸಿದ್ದಾರೆ. ಬಳಿಕ ಕುಮಾರಸ್ವಾಮಿ ಕಾಪುವಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News