ರಾಹುಲ್ ಅಮೇಠಿಯಲ್ಲಿ ಸೋತರೆ ರಾಜಕೀಯ ನಿವೃತ್ತಿ: ಸಿಧು

Update: 2019-04-29 06:37 GMT

ರಾಯ್ ಬರೇಲಿ, ಎ.29: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರದಿಂದ ಸೋತರೆ ತಾವು ರಾಜಕೀಯ ತೊರೆಯುವುದಾಗಿ ರಾಜಕಾರಣಿ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ರಾಯ್ ಬರೇಲಿ ಕ್ಷೇತ್ರದ ಹಾಲಿ ಸಂಸದೆಯಾಗಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ರಾಷ್ಟ್ರವಾದದ ಬಗ್ಗೆ ಜನರು ಕಲಿಯಬೇಕು ಎಂದು ಪಂಜಾಬ್ ಸಚಿವರೂ ಆಗಿರುವ ಸಿಧು ಹೇಳಿದರು.

ದೇಶದಲ್ಲಿ ಕಳೆದ 70 ವರ್ಷಗಳ ಅವಧಿಯಲ್ಲಿ ಹೆಚ್ಚಿನ ಅವಧಿ ಕಾಂಗ್ರೆಸ್ ಆಡಳಿತದ್ದಾಗಿದ್ದರೂ ಈ ಸಂದರ್ಭ ದೇಶದಲ್ಲಿ ಆರ್ಥಿಕ ಪ್ರಗತಿ ಸಾಧಿಸಲಾಗಿಲ್ಲ ಎಂಬ ಬಿಜೆಪಿಯ ಸತತ ಆರೋಪವನ್ನು ಸಿಧು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News