ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಗೆ ಹಲ್ಲೆ: ದೂರು ಪ್ರತಿದೂರು

Update: 2019-04-29 16:34 GMT

ಶಂಕರನಾರಾಯಣ, ಎ.29: ಬಸ್ಸಿನ ಸಮಯದ ವಿಚಾರದಲ್ಲಿ ಕೆಎಸ್ ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಖಾಸಗಿ ಬಸ್‌ನ ಚಾಲಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆಗೊಳಗಾಗಿರುವ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಮಾಳಪ ಗಡೆಕಾರ ಹಾಗೂ ಚಾಲಕ ಮಂಜುನಾಥ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಶಂಕರನಾರಾಯಣ ಬಸ್ ನಿಲ್ದಾಣದ ಬಳಿ ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಶ್ರೀದುರ್ಗಾಂಬ ಬಸ್ ಚಾಲಕ ಅರುಣ್ ಶೆಟ್ಟಿ ಎಂಬಾತ ಬಸ್ಸಿನ ಸಮಯದ ಬಗ್ಗೆ ಆಕ್ಷೇಪ ಮಾಡಿ ಅಡ್ಡ ನಿಲ್ಲಿಸಿದನು. ಬಳಿಕ ಮಾಳಪ ಗಡೆಕಾರ ಹಾಗೂ ಮಂಜು ನಾಥ ಅವರಿಗೆ ಅವಾಚ್ಯ ಶಬ್ದ ಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.

ಪ್ರತಿದೂರು: ಶಂಕರನಾರಾಯಣ ಬಸ್ ನಿಲ್ದಾಣಕ್ಕೆ ಆಗಮಿಸಿದ ಶ್ರೀ ದುರ್ಗಾಂಬ ಬಸ್‌ಗೆ ಅಡ್ಡವಾಗಿ ತಡೆದು ನಿಲ್ಲಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ಮಲ್ಲಪ್ಪಕೆ.ಎ., ಬಳಿಕ ಚಾಲಕ ಅರುಣ್ ಶೆಟ್ಟಿ ಎಂಬವರಿಗೆ ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿರುವುದಾಗಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News