ಅಮೆಮ್ಮಾರ್: ದಾರ್ಮಿಕ ಮತಪ್ರವಚನ, ಬುರ್ದಾ ಕಾರ್ಯಕ್ರಮದ ಸಮಾರೋಪ

Update: 2019-04-29 16:56 GMT

ಫರಂಗಿಪೇಟೆ, ಎ. 29: ಬದ್ರಿಯಾ ಮದರಸ ಮತ್ತು ಜುಮಾ ಮಸೀದಿ ವತಿಯಿಂದ ನಾಲ್ಕು ದಿವಸದ ದಾರ್ಮಿಕ ಮತ ಪ್ರವಚನ, ಬುರ್ದಾ, ನಹತೇ ಶೆರೀಫ್ ಕಾರ್ಯಕ್ರಮದ ಸಮಾರೋಪ ಸಮಾರಂಭ ರವಿವಾರ ನಡೆಯಿತು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಖತೀಬ್ ಅಬೂಸ್ವಾಲಿಹ್ ಪೈಝಿ ಮಜ್ಲಿಸುನ್ನೂರು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು, ಸಿರಾಜುದ್ದೀನ್ ಮದನಿ ಮತ್ತು ತಂಡ ಬುರ್ದಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಮಾಸ್ಟರ್ ಅಫೀರ್ ನಹತೇ ಶೇರೀಫ್ ಹಾಡಿದರು.

ಅತಿಥಿಗಳಾಗಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಉಪಾಧ್ಯಕ್ಷ ಅಬ್ದುಲ್ ಖಾದರ್, ಕೋಶಾಧಿಕಾರಿ ಮುಸ್ತಫ, ಅಬ್ದುಲ್ ಹಮೀದ್, ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಲೆಕ್ಕಪರಿಶೋಧಕ ಅಕ್ತರ್ ಹುಸೈನ್, ಸದಸ್ಯರಾದ ಜಮಾಲ್, ಇಬ್ರಾಹಿಮ್, ಅಬ್ದುಲ್ ರಝಾಕ್, ಸುಲೈಮಾನ್ ಉಸ್ತಾದ್, ಅನಸ್, ಮಕ್ಬೂಲ್, ಸದರ್ ಮುಅಲ್ಲಿಮ್ ಮುಹಿದ್ದೀನ್ ಅಲ್ ಹಸನಿ, ಉಸ್ಮಾನ್ ಹನೀಫಿ, ಇಸ್ಮಾಯಿಲ್ ಯಮಾನಿ, ಅಬೂಬಕ್ಕರ್ ಮದನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News