ಬಾವಿಯಲ್ಲಿ ಯುವತಿ ಮೃತದೇಹ ಪತ್ತೆ
Update: 2019-04-30 17:20 GMT
ಕೊಲ್ಲೂರು, ಎ.30: ಅರಣ್ಯ ಪ್ರದೇಶಕ್ಕೆ ಸೊಪ್ಪು ತರಲು ಹೋದ ಯುವತಿ ಯೊಬ್ಬಳ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಎ.30ರಂದು ಬೆಳಗಿನ ಜಾವ 6ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಕೊಲ್ಲೂರು ಸಲಗೇರಿ ನಿವಾಸಿ ರಘು ನಾಯ್ಕ ಎಂಬವರ ಮಗಳು ಶ್ರೀಲತಾ(25) ಎಂದು ಗುರುತಿಸಲಾಗಿದೆ.
ಎ.29ರಂದು ಸಂಜೆ 5ಗಂಟೆಗೆ ಮನೆಯ ಸಮೀಪದ ಅರಣ್ಯ ಪ್ರದೇಶಕ್ಕೆ ಸೊಪ್ಪುತರಲು ಹೋದ ಶ್ರೀಲತಾ ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಎ.30ರಂದು ಹುಡುಕಾಡಿ ದಾಗ ಬೆಳಗ್ಗೆ 6 ಗಂಟೆಗೆ ಮನೆಯ ತೋಟದ ಆವರಣವಿಲ್ಲದ ಬಾವಿಯಲ್ಲಿ ಶ್ರೀಲತಾ ಮೃತದೇಹವು ಪತ್ತೆಯಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.