ನಾನು ಪ್ರಧಾನಿಗೆ ಕರೆ ಮಾಡಿಲ್ಲ: ಮಮತಾ ಬ್ಯಾನರ್ಜಿ

Update: 2019-05-06 15:04 GMT

ಬಿಷ್ಣುಪುರ, ಮೇ 6: ಪ್ರಧಾನಿ ನರೇಂದ್ರ ಮೋದಿಯವ ರೊಂದಿಗೆ ವೇದಿಕೆ ಹಂಚಿಕೊಳ್ಳಲು ನನಗೆ ಇಷ್ಟ ಇಲ್ಲದೇ ಇರುವುದರಿಂದ ಫನಿ ಚಂಡಮಾರುತದ ಬಗ್ಗೆ ಚರ್ಚಿಸಲು ಪ್ರಧಾನಿ ಅವರು ಮಾಡಿದ ಕರೆಗೆ ನಾನು ಮರು ಕರೆ ಮಾಡಿಲ್ಲ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.

ಫನಿ ಚಂಡಮಾರುತದ ಪರಿಹಾರ ಕುರಿತಂತೆ ಮಮತಾ ಬ್ಯಾನರ್ಜಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಆರೋಪಿಸಿದ್ದರು. ಈ ಹೇಳಿಕೆ ಪಶ್ಚಿಮಬಂಗಾಳದಲ್ಲಿ ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ. ಪಶ್ಚಿಮಬಂಗಾಳದ ತಾಮ್ಲೂಕ್‌ನಲ್ಲಿ ಇಂದು ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘‘ಚಂಡಮಾರುತ ಅಪ್ಪಳಿಸುವ ಮೊದಲು ನಾನು ಮಮತಾ ದೀದಿ ಅವರಲ್ಲಿ ಮಾತನಾಡಲು ಪ್ರಯತ್ನಿಸಿದೆ. ಆದರೆ, ಅಹಂಕಾರದಿಂದ ಅವರು ಮಾತನಾಡಲು ನಿರಾಕರಿಸಿದರು’’ ಎಂದರು.

‘‘ಅವರು ನನಗೆ ಮತ್ತೆ ಕರೆ ಮಾಡಬಹುದು ಎಂದು ಕಾಯುತ್ತಿದ್ದೆ. ಆದರೆ, ಅವರು ಕರೆ ಮಾಡಲಿಲ್ಲ. ನಾನು ಮತ್ತೆ ಅವರಿಗೆ ಕರೆ ಮಾಡಿದೆ. ನನಗೆ ಬಂಗಾಳದ ಜನರ ಬಗ್ಗೆ ಚಿಂತೆ ಆಗಿತ್ತು. ನಾನು ಮಮತಾ ಬ್ಯಾನರ್ಜಿ ಅವರಲ್ಲಿ ಮಾತನಾಡಲು ಬಯಸಿದ್ದೆ. ಆದರೆ, ಅವರು ಎರಡನೇ ಬಾರಿ ಕೂಡ ನನ್ನೊಂದಿಗೆ ಮಾತನಾಡಲಿಲ್ಲ’’ ಎಂದು ಮೋದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News