ಚರಂಡಿಗೆ ಬಿದ್ದು ಮೃತ್ಯು

Update: 2019-05-06 15:44 GMT

ಹೆಬ್ರಿ, ಮೇ 6: ವಿಪರೀತ ಮದ್ಯ ಸೇವಿಸಿದ ವ್ಯಕ್ತಿಯೊಬ್ಬರು ಆಯತಪ್ಪಿ ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಮೇ 5ರಂದು ಅಪರಾಹ್ನ ವೇಳೆ ಬೇಳಂಜೆ ಗ್ರಾಮದ ಸುಭಾಶನಗರದ ಬಸ್ ನಿಲ್ದಾಣದ ಬಳಿ ನಡೆದಿದೆ.

ಮೃತರನ್ನು ಚಾರಾ ಗ್ರಾಮದ ಕೊಂಡೆಜಡ್ಡು ನಿವಾಸಿ ಲಕ್ಷ್ಮಣ ನಾಯ್ಕ್(60) ಎಂದು ಗುರುತಿಸಲಾಗಿದೆ. ವಿಪರೀತ ಮದ್ಯ ಸೇವಿಸಿ ಮೋರಿಯ ಮೇಲೆ ಕುಳಿತಿದ್ದ ಇವರು ಅಯತಪ್ಪಿಕೆಳಗೆ ನೀರು ಹೋಗುವ ಚರಂಡಿಗೆ ತಲೆ ಕೆಳಗಾಗಿ ಮಗುಚಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News