ಹೊರೆಕಾಣಿಕೆ ಶೋಭಾಯಾತ್ರೆಯಲ್ಲಿ ಮುಸ್ಲಿಮರಿಂದ ಐಸ್‌ಕ್ರೀಂ ವಿತರಣೆ

Update: 2019-05-08 14:33 GMT

ಶಿರ್ವ, ಮೇ 8: ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಹಸಿರು ಹೊರೆಕಾಣಿಕೆ ಶೋಭಾಯಾತ್ರೆಯ ಸಂದರ್ಭ ಮುಸ್ಲಿಮರು ಮಂಗಳವಾರ ಐಸ್‌ಕ್ರೀಂ ವಿತರಿಸು ಮೂಲಕ ಸೌಹಾರ್ದತೆ ಮೆರೆದರು.

ದೇವಳ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು, ವರ್ಷಾವಧಿ ರಥೋತ್ಸವ ಪೂರ್ವಭಾವಿಯಾಗಿ ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ವೇದಿಕೆಯಿಂದ ಬಂಟಕಲ್ಲು ಶ್ರೀಕ್ಷೇತ್ರಕ್ಕೆ ಹೊರಟ ಹಸಿರು ಹೊರೆಕಾಣಿಕೆ ಶೋಭಾಯಾತ್ರೆಯನ್ನು ಶಿರ್ವ ಜಾಮೀಯಾ ಮಸೀದಿ ಬಳಿ ಮಸೀದಿಯ ಆಡಳಿತ ಮಂಡಳಿ ಪದಾಧಿ ಕಾರಿಗಳು ಸ್ವಾಗತಿಸಿ ಯಾತ್ರೆಯಲ್ಲಿ ಭಾಗವಹಿಸಿದ ಸುಮಾರು 2000 ಕ್ಕೂ ಅಧಿಕ ಭಕ್ತರಿಗೆ ಐಸ್‌ಕ್ರೀಮ್ ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿರ್ವ ಜಾಮೀಯಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಮೊದಿನ್ ಮಹಮ್ಮದ್, ಮಸೀದಿಯ ಧರ್ಮಗುರು ಸಿರಾಜ್ಜುದ್ದೀನ್ ಝೈನಿ, ಹಸನಬ್ಬ ಶೇಖ್, ಉಮ್ಮರ್ ಇಸ್ಮಾಯಿಲ್, ಅಬೂಬಕರ್ ಪಾದೂರು, ಮಹಮ್ಮದ್ ಸಾಹೇಬ್, ಹುಸೈನಬ್ಬ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News