ಉಡುಪಿ: ಶುಕ್ರವಾರ ನೀರು ಸರಬರಾಜಾಗುವ ಪ್ರದೇಶಗಳು

Update: 2019-05-09 15:09 GMT

ಉಡುಪಿ, ಮೇ 9: ಉಡುಪಿ ನಗರಸಭೆಗೆ ಕುಡಿಯುವ ನೀರು ಒದಗಿಸುವ ಬಜೆ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಅಲ್ಲಲ್ಲಿ ಹೊಂಡಗಳಲ್ಲಿ ನಿಂತಿರುವ ನೀರನ್ನು ಡ್ರೆಡ್ಜಿಂಗ್ ಮುಖಾಂತರ ಜಾಕ್‌ವೆಲ್‌ಗೆ ಹಾಯಿಸಿಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ.

ನಾಳೆ ಮೇ 10ರ ಶುಕ್ರವಾರದಂದು ಈ ಕೆಳಕಂಡ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. ಬೆಳಿಗ್ಗೆ ಅಗತ್ಯವಿರುವ ನೀರಿನ ಪ್ರಮಾಣ ಲಭ್ಯತೆ ಇಲ್ಲದಿದ್ದಲ್ಲಿ, ಅಪರಾಹ್ನದ ನಂತರ ನೀರು ಸರಬರಾಜು ಮಾಡಲಾಗುವುದು ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರು ಸರಬರಾಜಾಗುವ ಪ್ರದೇಶ: ಈಶ್ವರ ನಗರ, ನೆಹರೂ ನಗರ, ಸರಳೇಬೆಟ್ಟು, ಕೊಂಡಂಗೆ, ನರಸಿಂಗೆ, ವಿವೇಕಾನಂದ ನಗರ, ಶೇಷಾದ್ರಿ ನಗರ, ವಿ.ಪಿ.ನಗರ, ಇಂದ್ರಾಳಿ, ಗುಳ್ಮೆ, ರೈಲ್ವೆ ಗೋಡಾನ್ ರೋಡ್, ಮಂಚಿ ಶಾಲೆ ರಸ್ತೆ, ಹಯಗ್ರೀವ ನಗರ, ಲಕ್ಷ್ಮೀಂದ್ರ ನಗರ, ಸಗ್ರಿ, ಪೆರಂಪಳ್ಳಿ, ಅಂಬಡೆಬೆಟ್ಟು, ವಿ.ಎಂ.ನಗರ, ದೊಡ್ಡಣಗುಡ್ಡೆ ರೈಲ್ವೆ ಸೇತುವೆವರೆಗೆ, ಪೆರಂಪಳ್ಳಿ ರೈಲ್ವೆ ಸೇತುವೆ ವರೆಗೆ, ಆದಿಪರಾಶಕ್ತಿ ದೇವಸ್ಥಾನ ರಸ್ತೆ, ರುದ್ರಪ್ರಿಯ ನಗರ, ಪರ್ತಕರ್ತರ ಕಾಲೋನಿ, ವಿದ್ಯಾರತ್ನ ನಗರ, ಶೀಂಬ್ರ, ಮಣಿಪಾಲ ಸಿಟಿ, ಕೊಡಂಕೂರು, ನ್ಯೂ ಕೊಡಂಕೂರು, ಸಾಯಿಬಾಬಾ ನಗರ, ಮೂಡಬೆಟ್ಟು, ಆದಿ ಉಡುಪಿ, ಮುಖ್ಯಪ್ರಾಣ ನಗರ, ನಾಗೇಶ್‌ನಗರ ಮತ್ತು ಕುದ್ಮಲ್ ರಂಗರಾವ್‌ನಗರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News