ಮೇ12: ಪೆರಂಪಳ್ಳಿಯಲ್ಲಿ ಸಿರಿತುಪ್ಪೆ-2019 ಕಾರ್ಯಕ್ರಮ

Update: 2019-05-09 15:12 GMT

ಉಡುಪಿ, ಮೇ 9: ಉಡುಪಿ ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ವಾರ್ಷಿಕ ಹಬ್ಬ, ಕೃಷಿ ವಿಚಾರಧಾರೆ ಕಾರ್ಯಕ್ರಮ ‘ಸಿರಿತುಪ್ಪೆ-2019’ ಮೇ 12ರ ರವಿವಾರ ಸಂಜೆ 3:30ಕ್ಕೆ ಪೆರಂಪಳ್ಳಿ ಬೊಬ್ಬರ್ಯಕಟ್ಟೆ ವಠಾರದಲ್ಲಿ ನಡೆಯಲಿದೆ. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಶ್ರೀಯಾನ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎರ್ಮಾಳು ಬಡಾ ಸರಕಾರಿ ಪ.ಪೂರ್ವ ಕಾಲೇಜು ಪ್ರಾಂಶುಪಾಲೆ ಜ್ಯೋತಿ ಚೇಳ್ಯಾರ್, ಕೃಷಿ ಸಂಸ್ಕೃತಿ ಬೊಕ್ಕ ತುಳುನಾಡ್ದ ಪೊಂಜೋವುಲು, ಸಮಗ್ರ ಕೃಷಿ ಪದ್ಧತಿ ಕುರಿತು ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ತುಳು ಭಾಷೆ ಬೊಕ್ಕ ಸಂಸ್ಕೃತಿ ವಿಷಯವಾಗಿ ಉಡುಪಿ ಸಿರಿ ತುಳು ಚಾವಡಿಯ ಈಶ್ವರ್ ಚಿಟ್ಪಾಡಿ, ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿಯ ಪ್ರಸನ್ನ ಪಿ. ಭಟ್ ವಿಚಾರ ಮಂಡನೆ ಮಾಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿರಿ ತುಳುವ ಚಾವಡಿ ಉಡುಪಿ ಇವರಿಂದ ‘ಅಂಗಣದ ಐಸಿರಿ’, ತುಳು ಪಾತೆರ ಕಥೆ, ತುಳು ಜಾನಪದ ನಲಿಕೆ, ತುಳು ಪದೊಕುಲು ಮತ್ತು ಸ್ಥಳೀಯರಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News