ಅಶ್ಲೀಲ ಕರಪತ್ರ ವಿತರಣೆ ಪ್ರಕರಣ: ಆಪ್ ನಾಯಕರಿಗೆ ಗಂಭೀರ್‌ರಿಂದ ಮಾನನಷ್ಟ ನೋಟಿಸ್

Update: 2019-05-11 04:07 GMT

ಹೊಸದಿಲ್ಲಿ, ಮೇ 10: ಅಶ್ಲೀಲ ಕರಪತ್ರ ವಿತರಿಸಿರುವುದಾಗಿ ಆರೋಪ ಮಾಡಿರುವ ಆಪ್‌ನ ಆತಿಶ್, ಕೇಜ್ರಿವಾಲ್ ಹಾಗೂ ಸಿಸೋಡಿಯ ಅವರಿಗೆ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಮಾನನಷ್ಟ ನೋಟಿಸು ರವಾನಿಸಿದ್ದಾರೆ. ತಪ್ಪು ಹಾಗೂ ಆಧಾರರಹಿತ ಆರೋಪ ಮಾಡಿರುವುದಕ್ಕೆ ನೀವು (ಆತಿಶ್, ಕೇಜ್ರಿವಾಲ್, ಸಿಸೋಡಿಯಾ) ಬೇಷರತ್ ಕ್ಷಮೆ ಕೋರಬೇಕು ಎಂದು ನೋಟಿಸಿನಲ್ಲಿ ಹೇಳಲಾಗಿದೆ.

ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿ ಭೇಷರತ್ ಕ್ಷಮೆ ಕೋರುವಂತೆ ಆಗ್ರಹಿಸಿ ಮಾಜಿ ಕ್ರಿಕೆಟಿಗ ಹಾಗೂ ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಆಪ್‌ನ ನಾಯಕಿ ಆತಿಶ್, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮಾನನಷ್ಟ ನೋಟಿಸು ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News