ಆಕಸ್ಮಿಕ ಗುಂಡು ಹಾರಾಟ: ಗಾಯಾಳು ಮತಗಟ್ಟೆ ಅಧಿಕಾರಿ ಆಸ್ಪತ್ರೆಯಲ್ಲಿ ನಿಧನ

Update: 2019-05-12 12:54 GMT

ಪಾಟ್ನ, ಮೇ 12: ಬಿಹಾರದಲ್ಲಿ ಮತದಾನದ ಸಂದರ್ಭ ನಡೆದ ಆಕಸ್ಮಿಕ ಗುಂಡು ಹಾರಾಟದಲ್ಲಿ ಗಾಯಗೊಂಡಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವೇಂದ್ರ ಕುಮಾರ್ ಎಂಬವರು ಬಿಹಾರದ ಶಿಯೋಹಾರ್ ಜಿಲ್ಲೆಯ 257ನೇ ಬೂತ್‌ನಲ್ಲಿ ಮತಗಟ್ಟೆ ಅಧಿಕಾರಿಯಾಗಿದ್ದರು. ರವಿವಾರ ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಕರ್ತವ್ಯಕ್ಕೆ ನಿಯೋಜಿತನಾಗಿದ್ದ ಭದ್ರತಾ ಸಿಬ್ಬಂದಿಯ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ಶಿವೇಂದ್ರ ಕುಮಾರ್ ಅವರ ಹೊಟ್ಟೆಯ ಒಳಹೊಕ್ಕಿತ್ತು.

ತಕ್ಷಣ ಕುಸಿದುಬಿದ್ದ ಕುಮಾರ್‌ರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕುಮಾರ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News