ಅಡಕೆ ಮರದಿಂದ ಬಿದ್ದು ವ್ಯಕ್ತಿ ಮೃತ
Update: 2019-05-12 20:39 IST
ಪುತ್ತೂರು: ಅಡಕೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿ ರವಿವಾರ ನಡೆದಿದೆ.
ಮುಂಡೂರು ಗ್ರಾಮದ ಪುಲಿಂಕೆತ್ತಡಿ ನಿವಾಸಿ ಕಿಸ್ತು ಡಿಸೋಜ ಎಂಬವರ ಪುತ್ರ ಪ್ರಕಾಶ್ ಡಿಸೋಜ (40) ಎಂಬವರು ಮೃತಪಟ್ಟವರು.
ಮನೆಯ ಪಕ್ಕದಲ್ಲಿದ್ದ ಅಡಕೆ ಮರದಿಂದ ಬಿದ್ದ ಅವರನ್ನು ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಒಯ್ಯುತ್ತಿರುವಾಗ ದಾರಿ ಮಧ್ಯೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಮತ್ತು 3 ಮಕ್ಕಳನ್ನು ಅಗಲಿದ್ದಾರೆ.