ದೈವದ ದರ್ಶನ ಮೈಮೇಲೆ ಬಂದ ವ್ಯಕ್ತಿ ಕುಸಿದು ಬಿದ್ದು ಮೃತ್ಯು

Update: 2019-05-13 16:05 GMT

ಹಿರಿಯಡ್ಕ, ಮೇ 13: ದೈವದ ದರ್ಶನ ಮೈಮೇಲೆ ಬಂದು ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮೇ 12ರಂದು ರಾತ್ರಿ 8.30ರ ಸುಮಾರಿಗೆ ಪೆರ್ಡೂರು ಗ್ರಾಮದ ಪಾಡಿಗಾರ ಮುಕ್ಕುಡುಜೆಡ್ಡು ಎಂಬಲ್ಲಿ ನಡೆದಿದೆ.

ಮೃತರನ್ನು ಮುಕ್ಕುಡುಜೆಡ್ಡುವಿನ ಬೊನ್ಯೋಲು (70) ಎಂದು ಗುರುತಿಸ ಲಾಗಿದೆ. ಇವರು ಹೃದಯ ಒತ್ತಡದ ಖಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿ ನಡೆದ ದೈವದ ತಂಬಿಲ ಸೇವೆಯ ಸಂದರ್ಭ ಇವರಿಗೆ ದೈವದ ದರ್ಶನ ಮೈಮೇಲೆ ಬಂತ್ತೆನ್ನಲಾಗಿದೆ.

ಇದರಿಂದ ಒಮ್ಮೆಲೇ ಕುಸಿದು ಬಿದ್ದು ಅಸ್ವಸ್ಥಗೊಂಡ ಇವರನ್ನು ಕೂಡಲೇ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಇವರು ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಮೃತರು ಹೃದಯಾಘಾತ ಅಥವಾ ಸಹಜವಾಗಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News