ಎಸ್ಸೆಸ್ಸೆಫ್, ಎಸ್.ವೈ.ಎಸ್ ಹೂಹಾಕುವ ಕಲ್ಲು ಶಾಖೆ ವತಿಯಿಂದ ರಮಳಾನ್ ಕಿಟ್ ವಿತರಣೆ

Update: 2019-05-14 16:35 GMT

ಮುಡಿಪು: ಎಸ್ಸೆಸ್ಸೆಫ್, ಎಸ್ವೈಸ್ ಹೂಹಾಕುವಕಲ್ಲು ಶಾಖೆಯ ವತಿಯಿಂದ ಅರ್ಹ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾನುಗಳನ್ನು ಒಳಗೊಂಡ ಸುಮಾರು 53ರಷ್ಟು ರಮಳಾನ್ ವಿಶೇಷ ಕಿಟ್ ವಿತರಿಸಲಾಯಿತು.

ಶಾಖಾ ಕಚೇರಿ ಮುಂಭಾಗದಲ್ಲಿ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು SYS ಬ್ರಾಂಚ್ ಅಧ್ಯಕ್ಷ ಮೊಹಿದಿನ್ ಕುಂಞಿ ತೋಟಾಲ್ ವಹಿಸಿದ್ದರು. ಬದ್ರಿಯಾ ಜುಮಾ ಮಸ್ಜಿದ್ ಹೂಹಾಕುವಕಲ್ಲು ಖತೀಬ್ ರಫೀಕ್ ಅಹ್ಸನಿ ಕಕ್ಕೆಪದವು ಉಸ್ತಾದರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಬಾಳೆಪುಣಿ ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಸಖಾಫಿ ಕಾಯಾರ್, ಪ್ರ.ಕಾರ್ಯದರ್ಶಿ ಝೈನುದ್ದೀನ್ ಇರಾ ಶುಭ ಹಾರೈಸಿದರು.

ಶಾಖಾ ಅಧ್ಯಕ್ಷ ಉಸ್ಮಾನ್ ಎನ್, ಅಝೀಝ್ ಎಚ್ಕಲ್ಲ್, ಹಮೀದ್ ಎನ್, ಸೇರಿದಂತೆ ಹಲವು ಶಾಖಾ ನಾಯಕರು ಉಪಸ್ಥಿತರಿದ್ದರು. ಕಿಟ್ ಗಳನ್ನು ಅರ್ಹರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News