ಮಂಗಳೂರು ಲಾಡ್ಜ್ನಲ್ಲಿ ವಿಟ್ಲ ಯುವಕ ನೇಣುಬಿಗಿದು ಆತ್ಮಹತ್ಯೆ
ಮಂಗಳೂರು, ಮೇ 14: ನಗರದ ಪಂಪ್ವೆಲ್ನಲ್ಲಿರುವ ಲಾಡ್ಜ್ವೊಂದರಲ್ಲಿ ವಿಟ್ಲದ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಕಸಬ ನಿವಾಸಿ ಜಯಂತ್ (29) ಆತ್ಮಹತ್ಯೆಗೈದ ಯುವಕ. ಇವರು ಸಿವಿಲ್ ಕಂಟ್ರಾಕ್ಟರ್ ಆಗಿದ್ದರೆಂದು ತಿಳಿದುಬಂದಿದೆ.
ಜಯಂತ್ ಮೇ 11ರಂದು ಮನೆಯಿಂದ ಪುತ್ತೂರಿಗೆ ಹೋಗುವುದಾಗಿ ಹೊರಟಿದ್ದರು. ಮೇ 13ರಂದು ಮನೆಗೆ ಕರೆ ಮಾಡಿ ಉಡುಪಿಯಲ್ಲಿದ್ದೇನೆ ಎಂದು ಹೇಳಿದ್ದಾರೆ. ಆದರೆ ಸಂಶಯಗೊಂಡ ಮನೆಯವರು ಯುವಕನಿಗಾಗಿ ಶೋಧ ಆರಂಭಿಸಿದ್ದರು.
ಸೋಮವಾರ ನಗರಕ್ಕೆ ಬಂದಾಗ ಪಂಪ್ವೆಲ್ ಹೊಟೇಲ್ ಬಳಿ ಯುವಕನ ಸ್ಕೂಟರ್ ಪತ್ತೆಯಾಗಿದೆ. ಬಳಿಕ ಮನೆಯವರು ಹೊಟೇಲ್ಗೆ ಹೋಗಿ ವಿಚಾರಿಸಿದಾಗ ಯುವಕ ರೂಮು ಪಡೆದಿರುವುದು ಗೊತ್ತಾಗಿದೆ. ಆದರೆ ರೂಮಿಗೆ ಹೋಗಿ ನೋಡಿದಾಗ ಬಾಗಿಲು ಹಾಕಲಾಗಿತ್ತು. ಬಾಗಿಲು ಬಡಿದರೂ ಯಾವುದೇ ಸ್ಪಂದನೆ ಸಿಗದಿದ್ದಾಗ ಬಾಗಿಲು ಕೀ ಮುರಿದು ಒಳನೋಡಿದಾಗ ಯುವಕ ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿದೆ.
ಯುವಕ ಮೇ 11ಕ್ಕೆ ಹೊಟೇಲ್ನಲ್ಲಿ ರೂಮು ಮಾಡಿದ್ದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣವೇನೆಂದು ತಿಳಿದು ಬಂದಿಲ್ಲ.