ಮುಝಫ್ಫರ್‌ನಗರ ದಂಗೆಗಳು: ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಮೃತ ಯುವಕನ ಕುಟುಂಬದ ಆಗ್ರಹ

Update: 2019-05-14 18:16 GMT

ಮುಝಫ್ಫರ್‌ನಗರ,ಮೇ 14: ಮುಝಫ್ಫರ್‌ನಗರದಲ್ಲಿ 2013ರ ದಂಗೆಗಳಿಗೆ ಮುನ್ನ ಕೊಲೆಯಾಗಿದ್ದ ಯುವಕರ ಪೈಕಿ ಓರ್ವನ ಕುಟುಂಬವು ತಮ್ಮ ಪುತ್ರನ ಸಾವಿಗೆ ಸಂಬಂಧಿಸಿದ ಎಲ್ಲ ಆರೂ ಆರೋಪಿಗಳನ್ನು ಬಂಧಿಸುವಂತೆ ಮತ್ತು ಅವರ ಆಸ್ತಿಗಳನ್ನು ಜಪ್ತಿ ಮಾಡಲು ನ್ಯಾಯಾಲಯವು ಹೊರಡಿಸಿರುವ ಆದೇಶವನ್ನು ಜಾರಿಗೊಳಿಸುವಂತೆ ಮಂಗಳವಾರ ಪೊಲೀಸರನ್ನು ಆಗ್ರಹಿಸಿದೆ.

 ಹತ ಶಾನವಾಝ್ ತಂದೆಯ ನೇತೃತ್ವದಲ್ಲಿ ಎಸ್‌ಎಸ್‌ಪಿಯವರನ್ನು ಭೇಟಿಯಾದ ಜನ್ಸತ್ ಪ್ರದೇಶದ ಕವಾಲ್ ಗ್ರಾಮಸ್ಥರು ಈ ಬೇಡಿಕೆಯನ್ನು ಮಂಡಿಸಿದರು.

 ಪದೇ ಪದೇ ಬಂಧನ ವಾರಂಟ್‌ಗಳನ್ನು ಹೊರಡಿಸಿದ್ದರೂ ಆರೋಪಿಗಳು ಶರಣಾಗಲು ವಿಫಲಗೊಂಡಿದ್ದರಿಂದ ಸ್ಥಳೀಯ ನ್ಯಾಯಾಲಯವು ಅವರ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು ಎಂದು ದೂರುದಾರರ ಪರ ವಕೀಲ ಮೊಹ್ಸಿನ್ ಝೈದಿ ತಿಳಿಸಿದರು.

2013 ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮುಝಫ್ಫರ್‌ನಗರ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಕೋಮು ಘರ್ಷಣೆಗಳು ನಡೆದು 60 ಜನರು ಸಾವನ್ನಪ್ಪಿದ್ದರು ಮತ್ತು 40,000ಕ್ಕೂ ಅಧಿಕ ಜನರು ನಿರ್ವಸಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News