ಮೀನುಗಾರರ ನಿಯೋಗದ ಕೇಂದ್ರ ರಕ್ಷಣಾ ಸಚಿವೆ ಭೇಟಿ ಮುಂದೂಡಿಕೆ

Update: 2019-05-15 16:25 GMT

ಉಡುಪಿ, ಮೇ 15: ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಸಂಬಂಧಿಸಿ ಪರಿಹಾರ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲು ಕರಾವಳಿಯ ಮೀನುಗಾರರನ್ನೊಳಗೊಂಡ ನಿಯೋಗದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿ ಕಾರ್ಯಕ್ರಮದ ದಿನಾಂಕವನ್ನು ಕೊನೆ ಕ್ಷಣದಲ್ಲಿ ಮುಂದೂಡಲಾಗಿದೆ.

ಈ ಭೇಟಿ ಮೇ 17ರಂದು ಹೊಸದಿಲ್ಲಿಯಲ್ಲಿ ನಡೆಯಲು ನಿಗದಿಯಾಗಿತ್ತು. ಇದಕ್ಕಾಗಿ ನಿಯೋಗ ಬುಧವಾರ ಇಲ್ಲಿಂದ ತೆರಳಬೇಕಿತ್ತು. ಉತ್ತರ ಕನ್ನಡ ದಿಂದಲೂ ಒಂದಿಷ್ಟು ಮಂದಿ ಇವರನ್ನು ಸೇರಿಕೊಳ್ಳಬೇಕಾಗಿತ್ತು. ಇದಕ್ಕಾಗಿ ಮಲ್ಪೆಯಿಂದ ಜನಪ್ರತಿನಿಧಿಗಳು, ನಾಪತ್ತೆಯಾದ ಮೀನುಗಾರರ ಕುಟುಂಬಿಕರು ಹಾಗೂ ಮೀನುಗಾರ ಮುಖಂಡರು ಸೇರಿ ಆರು ಮಂದಿಗೆ ಗೋವಾದವರೆಗೆ ರೈಲು ಟಿಕೇಟು ಹಾಗೂ ಅಲ್ಲಿಂದ ಹೊಸದಿಲ್ಲಿಗೆ ವಿಮಾನ ಟಿಕೇಟನ್ನು ಕಾದಿರಿಸಲಾಗಿತ್ತು. ಇದೀಗ ಇವುಗಳನ್ನು ಅಂತಿಮ ಕ್ಷಣದಲ್ಲಿ ರ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News