ಲಾರಿ ಢಿಕ್ಕಿ: ಟಾಟಾ ಏಸ್ ಚಾಲಕ ಮೃತ್ಯು

Update: 2019-05-15 16:50 GMT

ಬೈಂದೂರು, ಮೇ 15: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನದ ಚಾಲಕ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಶಿರೂರು ನೀರ್ಗದ್ದೆ ಗ್ರೀನ್‌ವ್ಯಾಲಿ ಸ್ಕೂಲ್ ಬಳಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.

ಟಾಟಾ ಏಸ್ ವಾಹನ ಬೈಂದೂರು ಕಡೆಗೆ ತೆರಳುತಿದ್ದರೆ, ಬೈಂದೂರು ಕಡೆಯಿಂದ ವೇಗವಾಗಿ ಬಂದ ಲಾರಿಯ ಚಾಲಕ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಬಂದು ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಚಾಲಕ ಸುನೀಲ್ ಪೂಜಾರಿ ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದರೆ, ಅದರಲ್ಲಿದ್ದ ರೌಡಲ್ ವೌರ್ಯ ಎಂಬವ ಕಾಲು ಹಾಗೂ ಕೈಗೆ ಗಾಯವಾಗಿತ್ತು.

ಟಾಟಾ ಏಸ್ ವಾಹನ ಬೈಂದೂರು ಕಡೆಗೆ ತೆರಳುತಿದ್ದರೆ, ಬೈಂದೂರು ಕಡೆಯಿಂದ ವೇಗವಾಗಿ ಬಂದ ಲಾರಿಯ ಚಾಲಕ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಬಂದು ಟಾಟಾ ಏಸ್‌ಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಚಾಲಕ ಸುನೀಲ್ ಪೂಜಾರಿ ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದರೆ, ಅದರಲ್ಲಿದ್ದ ರೌಡಲ್ ವೌರ್ಯ ಎಂಬವರ ಕಾಲು ಹಾಗೂ ಕೈಗೆ ಗಾಯವಾಗಿತ್ತು. ಗಾಯಗೊಂಡ ಸುನೀಲ್‌ರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News