ಹೊಳೆಯಲ್ಲಿ ಮುಳುಗಿ ಮೃತ್ಯು

Update: 2019-05-15 16:51 GMT

ಕೋಟ, ಮೇ 15: ಸ್ನಾನ ಮಾಡಲೆಂದು ಬನ್ನಾಡಿ ಗ್ರಾಮದ ಹಿರೆಹೊಳೆಗೆ ಇಳಿದ ಮೂವರ ಪೈಕಿ ಒಬ್ಬರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಅಪರಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.

ಊರಿನ ಮಾರಿಪೂಜೆ ಪ್ರಯುಕ್ತ ಬನ್ನಾಡಿ ಗರೋಡಿ ದೈವಸ್ಥಾನಕ್ಕೆ ಸಂಪ್ರದಾಯದಂತೆ ಡೋಲು ಬಾರಿಸಲು ಹೋಗಿದ್ದ ವಡ್ಡರ್ಸೆಯ ಐತ, ಅವರ ಅಕ್ಕನ ಮಗ ಉಮೇಶ್ (40) ಹಾಗೂ ಸಂತೋಷ ಎಂಬವರ ಪೈಕಿ ಉಮೇಶ ಸ್ನಾನ ಮಾಡುತ್ತಾ ಆಳ ಪ್ರದೇಶಕ್ಕೆ ಹೋಗಿ ಮುಳುಗಿದ್ದು, ಉಳಿದಿಬ್ಬರು ಬೊಬ್ಬೆ ಹೊಡೆದಾಗ ಗ್ರಾಮಸ್ಥರು ಬಂದು ನೀರಿನಲ್ಲಿ ಮುಳುಗಿದ್ದ ಉಮೇಶ್‌ನನ್ನು ಮೇಲೆತ್ತಿ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದರೂ ಅವರಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News