ಗೋವಾಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ

Update: 2019-05-16 16:55 GMT

ಕಾಪು, ಮೇ 16: ಸ್ನೇಹಿತನೊಂದಿಗೆ ಗೋವಾಕ್ಕೆ ತೆರಳಿದ್ದ ಮಲ್ಲಾರು ನಿವಾಸಿ ಸಕೀರ್ (38) ಎಂಬವರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ಮೇ 13ರಂದು ಬೆಳಗ್ಗೆ ತನ್ನ ಸೇಹಿತ ಕರೀಂ ಜೊತೆ ಉಡುಪಿಗೆ ಹೋಗುವುದಾಗಿ ಹೇಳಿ ಹೋಗಿದ್ದು, ರಾತ್ರಿ ಕರೆ ಮಾಡಿ ತಾನು ಗೋವಾ ದಲ್ಲಿದ್ದು, ಮರುದಿನ ಬರುವುದಾಗಿ ತಿಳಿಸಿದ್ದರು. ಮರುದಿನ ರಾತ್ರಿ ಕರೆ ಮಾಡಿದ ಅವರು ನಾನು ರೈಲ್ವೆ ನಿಲ್ದಾಣದಲ್ಲಿದ್ದೇನೆ ಎಂದು ಪತ್ನಿಗೆ ಹೇಳಿದ್ದರು. ಆದರೆ ಸಕೀರ್ ಮತ್ತೆ ಸಂಪರ್ಕಕ್ಕೆ ಸಿಗದೆ ಮನೆಗೂ ಬಾರದೆ ನಾಪತ್ತೆಯಾಗಿರು ವುದಾಗಿ ಸಕೀರ್ ಪತ್ನಿ ಮೈಮುನಾ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News