ಅಕ್ರಮ ಮರಳು: ಟಿಪ್ಪರ್ ವಶ

Update: 2019-05-16 16:57 GMT

ಬೈಂದೂರು, ಮೇ 16: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಯನ್ನು ಬೈಂದೂರು ಪೊಲೀಸರು ಬಡಾಕೆರೆ ಗ್ರಾಮದ ಸಣ್ಕಳಿ ಎಂಬಲ್ಲಿ ಮೇ 16ರಂದು ಬೆಳಗಿನ ಜಾವ ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಟಿಪ್ಪರ್ ಲಾರಿ ಹಾಗೂ ಸುಮಾರು 6ಸಾವಿರ ರೂ. ಮೌಲ್ಯದ ಒಂದು ಯುನಿಟ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕ ಪೊಲೀಸ್ ದಾಳಿ ವೇಳೆ ಓಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ: ಚಾಲಕ ಸಹಿತ ಲಾರಿ ವಶಕ್ಕೆ

ಕೋಟ ಹೈಸ್ಕೂಲ್ ಬಳಿ ಮೇ 15ರಂದು ಸಂಜೆ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಚಾಲಕ ಸಹಿತ ಕೋಟ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗುಲ್ವಾಡಿ ಬೋಳಕಟ್ಟೆಯ ಮೊಹಮ್ಮದ್ ಶರೀಫ್(22) ಬಂಧಿತ ಆರೋಪಿ. ಅದೇ ರೀತಿ 10ಲಕ್ಷ ರೂ. ಮೌಲ್ಯದ ಲಾರಿ ಸಹಿತ ಅದರಲ್ಲಿದ್ದ 7,500ರೂ. ಮೌಲ್ಯದ ಎರಡೂವರೆ ಯುನಿಟ್ ಮರಳನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News