ಮಂಗಳೂರು: ಮಳೆಗಾಗಿ ಪ್ರಾರ್ಥನೆ ಮಾಡಲು ಬಿಷಪ್ ಕರೆ
Update: 2019-05-16 17:14 GMT
ಮಂಗಳೂರು, ಮೇ 16: ಮುಂಗಾರು ಮಳೆಯ ಅಭಾವದಿಂದ ತೀವ್ರ ನೀರಿನ ಸಮಸ್ಯೆ ಉದ್ಭವಿಸಿರುವ ಈ ಸಮಯದಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ್ಹ ಎಲ್ಲ ಕ್ರೈಸ್ತ ಧರ್ಮ ಕೇಂದ್ರಗಳು ಹಾಗೂ ಅದರ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಮೇ 18 ಹಾಗೂ 19ರಂದು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಲು ಕರೆ ಕೊಟ್ಟಿದ್ದಾರೆ.
ದೇವರಲ್ಲಿ ವಿಶ್ವಾಸದಿಂದ ಮೊರೆ ಹೋದಾಗ ಬೇಡಿದನ್ನು ಖಂಡಿವಾಗಿಯೂ ನೆರವೇರಿಸುತ್ತಾರೆ ಎಂದು ಪ್ರಕಟನೆಯಲ್ಲಿ ಬಿಷಪ್ ತಿಳಿಸಿದ್ದಾರೆ.