ದ.ಕ. ಜಿಲ್ಲೆಯ ವಿವಿಧೆಡೆ ಮಿಂಚು ಸಹಿತ ಮಳೆ

Update: 2019-05-18 17:28 GMT

ಮಂಗಳೂರು, ಮೇ 18: ಸುಬ್ರಹ್ಮಣ್ಯ, ಧರ್ಮಸ್ಥಳ, ಬೆಳ್ತಂಗಡಿ, ಗುತ್ತಿಗಾರು, ಕಮಿಲ, ಉಜಿರೆ, ಮುಂಡಾಜೆ ಸಹಿತ ವಿವಿಧೆಡೆ ಶನಿವಾರ ಸಂಜೆ ಗುಡುಗು, ಮಿಂಚು ಸಹಿತ ಅರ್ಧ ತಾಸಿಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ.

ಮಂಗಳೂರು, ಸುರತ್ಕಲ್, ಮುಕ್ಕ ಸಹಿತ ಕೆಲವೆಡೆ ಶುಕ್ರವಾರ ಮಧ್ಯರಾತ್ರಿಯಿಂದ ಕೆಲಕಾಲ ಮಳೆಯಾಗಿದೆ. ಕಡಬ, ಉಪ್ಪಿನಂಗಡಿ ಮತ್ತು ಕೆಲವೆಡೆ ಗುಡುಗು, ಮಿಂಚು ಜತೆ ಸಾಮಾನ್ಯ ಮಳೆಯಾಗಿದೆ.

ಕರಾವಳಿಯ ದೇವಾಲಯ, ಸರ್ವಧರ್ಮ ಪ್ರಾರ್ಥನಾ ಮಂದಿರ ಹಾಗೂ ಇತರ ತೆರೆದ ಪ್ರದೇಶಗಳಲ್ಲಿ ಮಳೆಗಾಗಿ ಪರ್ಜನ್ಯ ಜಪ, ರುದ್ರ ಪಾರಾಯಣ ವಿಷ್ಣುಸಹಸ್ರನಾಮ ಪಠಣ, ಸಾಮೂಹಿಕ ಪ್ರಾರ್ಥನೆಗಳು ನಡೆಸುತ್ತಿದ್ದ ವೇಳೆಯಲ್ಲೇ ವಿವಿಧೆಡೆ ಮಳೆ ಆರಂಭಗೊಂಡಿರುವುದು ಈ ಭಾಗದ ಜನರಲ್ಲಿ ಅಲ್ಪ ಮಟ್ಟಿನ ಸಮಾದಾನ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News